ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವೆ ಯುದ್ಧ ಮುಂದುವರೆದಿದೆ. ರಷ್ಯಾ ಅಧ್ಯಕ್ಷ ಪುಟಿನ್ 21ನೇ ಶತಮಾನದ ಹಿಟ್ಲರ್ ಎಂದು ಉಕ್ರೇನ್ ವಿದೇಶಾಂಗ ಸಚಿವ ಹೇಳಿದೆ. ಕೂಡಲೇ ಉಕ್ರೇನ್ ತೊರೆದು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಶತ್ರು ರಾಷ್ಟ್ರ ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ((Volodymyr Zelenskyy) ) ಕೊನೆಯ ಎಚ್ಚರಿಕೆ ನೀಡಿದ್ದಾರೆ. ಈವರೆಗೆ ರಷ್ಯಾದ 4,500 ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಸೇನೆ ರಷ್ಯಾದ ಮತ್ತೊಂದು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನವನ್ನು ಖಾರ್ಕಿವ್ನಲ್ಲಿ (Kharkiv) ಧ್ವಂಸಗೊಳಿಸಿದೆ. ಉಕ್ರೇನ್ಗೆ ಎನ್ಎಟಿಒ (NATO) ಮೈತ್ರಿಕೂಟ ದೇಶಗಳು ಸೇನಾ ನೆರವು ಹಾಗೂ ಆರ್ಥಿಕ ನೆರವು ನೀಡುತ್ತಿವೆ. ಯುದ್ಧ ಮಾಡಲು ಸರ್ವಾನುಮತದಿಂದ ಜನ ಒಪ್ಪಿದರೆ ಅವಕಾಶವಿದೆ ಎಂದು ಉಕ್ರೇನ್ನ ಲಾಟ್ವಿಯಾದ ಸಂಸತ್ನಲ್ಲಿ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ. ರಷ್ಯಾ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧರಿರುವ ಸೇನಾ ಅನುಭವ ಇರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ನಿಂದ ಈವರೆಗೆ 1,396 ಭಾರತೀಯರ ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ (Foreign Secretary Harshvardhan) ಹೇಳಿಕೆ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು, ಉಕ್ರೇನ್ಗೆ ಔಷಧ ನೆರವು ನೀಡುವುದಾಗಿ ಭಾರತ ಘೋಷಣೆ ಮಾಡಿದೆ. ಉಕ್ರೇನ್ಗೆ ಶಸ್ತ್ರಾಸ್ತ್ರ ನೀಡಲು ಸ್ಲೋವಾಕಿಯಾ ತೀರ್ಮಾನಿಸಿದೆ. ಉಕ್ರೇನ್ನ ಖಾರ್ಕಿವ್ ನಗರದಲ್ಲಿ ರಷ್ಯಾದಿಂದ ರಾಕೆಟ್ ದಾಳಿ ಮಡಲಾಗಿದ್ದು, ದಾಳಿಯಿಂದಾಗಿ 10-12 ಜನ ಮೃತಪಟ್ಟಿರುವುದಾಗಿ ವರದಿಯಾಗಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಉಕ್ರೇನ್ನಿಂದ ಭಾರತಕ್ಕೆ 6ನೇ ವಿಮಾನ ಬಂದಿಳಿದೆ. ಉಕ್ರೇನ್ನಿಂದ 240 ಭಾರತೀಯರನ್ನ ಏರ್ಇಂಡಿಯಾ ಫ್ಲೈಟ್ ಕರೆತಂದಿದೆ. ಈತನಕ ಒಟ್ಟು 1406 ಮಂದಿ ಆಗಮಿಸಿದ್ದು, ಅದರಲ್ಲಿ ಒಟ್ಟು 44 ಮಂದಿ ಕನ್ನಡಿಗರಿದ್ದರು.