National News: ಪ್ರಧಾನಿ ನರೇಂದ್ರ ಮೋದಿ 50 ಗ್ರಾಮ್ ಇರುವ ಅಯೋಧ್ಯಾ ಮಂದಿರ ಮತ್ತು ರಾಮಲಲ್ಲಾ ಮೂರ್ತಿ ಇರುವ ಬೆಳ್ಳಿ ನಾಣ್ಯವನ್ನು ರಿಲೀಸ್ ಮಾಡಿದ್ದಾರೆ. ಇದನ್ನು ಸಾರ್ವಜನಿಕರು ಕೂಡ ಕೊಂಡಕೊಳ್ಳಬಹುದಾಗಿದೆ. 5,860 ರೂಪಾಯಿಯ ಈ ಬೆಳ್ಳಿ ನಾಣ್ಯವು, ಸೀಮಿತ ಅವಧಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ.
ಇದೇ ವರ್ಷ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡಲಾಗಿದ್ದು, ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈಗಾಗಲೇ ಬಾಲರಾಮನಿಗೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಉಡುಗೊರೆ, ಕಾಣಿಕೆಗಳು ಸಂಗ್ರಹವಾಗಿದ್ದು, ಕೋಟಿ ಕೋಟಿ ಹಣ ಮತ್ತು ಬಂಗಾರ, ಬೆಳ್ಳಿ ವಸ್ತುಗಳನ್ನು ಭಕ್ತರು ರಾಮಲಲ್ಲಾನಿಗೆ ಕಾಣಿಕೆಯಾಗಿ ಹಾಕಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಓರ್ವ ನಿವೃತ್ತ ಅಧಿಕಾರಿ 5 ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದಿಂದ ತಯಾರಿಸಿ, ರಮಚರಿತ ಮಾನಸ ಪುಸ್ತಕವನ್ನು ರಾಮಲಲ್ಲಾನಿಗೆ ಅರ್ಪಿಸಿದ್ದಾರೆ. ಅವರ ಜೀವಮಾನದ ಸಂಪಾದನೆಯನ್ನು ರಾಮನಿಗೆ ನೀಡುತ್ತೇನೆ ಎಂದು ಅವರು ಹೇಳಿಕೊಂಡಿದ್ದು, ಆ ಮಾತಿನಂತೆ ಅವರು ಶ್ರೀರಾಮನಿಗೆ ಚಿನ್ನನದ ಪುಸ್ತಕ ಕಾಣಿಕೆಯಾಗಿ ನೀಡಿದ್ದಾರೆ.
ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್ ಕಟ್ಟಲು ದುಡ್ಡಿಲ್ಲ
ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ಜೋಶಿ ಪರ ಮತಯಾಚನೆಗೆ ಧಾರವಾಡಕ್ಕೆ ಬಂದ ಕೋರೆ..