Bengaluru News: ಕಳೆದ ವಾರ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟವಾಗಿದ್ದು, ಕ್ಯಾಪ್ ಮಾಸ್ಕ್ ಧರಿಸಿ, ಕೆಫೆಯಲ್ಲಿ ತಿಂಡಿ ತಿಂದು ಬ್ಯಾಗ್ ಇರಿಸಿಹೋಗಿದ್ದ ವ್ಯಕ್ತಿ, ಬಾಂಬ್ ಸ್ಪೋಟಿಸಿದ್ದ.
ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಕೂಡ, ಪ್ರಮುಖ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕೆಲ ಆರೋಪಿಗಳನ್ನು ಬಂಧಿಸಿದರೂ ಕೂಡ, ಪ್ರಮುಖ ಆರೋಪಿಯ ಸುಳಿವು ಸಿಗದ ಕಾರಣ, ಇದೀಗ ಈ ಆರೋಪಿಯನ್ನು ಹುಡುಕಿ ಕೊಟ್ಟಲ್ಲಿ, 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಎನ್ಐಎ ಈ ರೀತಿ ಘೋಷಣೆ ಮಾಡಿದ್ದು, ಫೋಟೋದಲ್ಲಿ ಕೊಟ್ಟಿರುವ ನಂಬರ್ಗೆ ಕಾಲ್ ಮಾಡಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಈ ಮೇಲ್ಗೆ ಮೇಲ್ ಮಾಡಬೇಕು. ಇನ್ನು ಯಾರು ಈ ವ್ಯಕ್ತಿಯ ಬಗ್ಗೆ ಸುಳಿವು ನೀಡುತ್ತಾರೋ, ಅವರ ಪರಿಚಯವನ್ನು ಕೂಡ ಗೌಪ್ಯವಾಗಿ ಇರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ