Thursday, October 16, 2025

Latest Posts

ನಾನ್ಯಾಕೆ ಕ್ಷಮೆ ಕೇಳಲಿ – ರಾಕ್ ಲೈನ್

- Advertisement -

www.karnatakatv.net ಬೆಂಗಳೂರು:  ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಜುಗಲ್ ಬಂದಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ಕುಮಾರಸ್ವಾಮಿ ಅವರ ಬೆಂಬಲಿಗರು ಕ್ಷಮೆ ಕೇಳುವಂತೆ ಆಗ್ರಹಿಸಿ ವೆಂಕಟೇಶ್ ಮನೆ ಮುಂದೆ ಮುತ್ತಿಗೆ ಹಾಕಿದ್ದರು. ಅದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಕ್ ಲೈನ್ ನಾನು ಯಾರಿಗೆ ಯಾಕೆ ಕ್ಷಮೆ ಕೇಳಬೇಕು. ನಾನು ಏನು ತಪ್ಪು ಮಾತಾಡಿಲ್ಲ. ಅಂಬರೀಶ್ ಕನ್ನಡದ ಆಸ್ತಿ, ಅವರ ಬಗ್ಗೆ ಮಾತಾಡಿದಾಗ ಸುಮ್ಮನಿರಬೇಕ? ರಾಜಕೀಯದ ಬಗ್ಗೆ ಮಾತಾಡಿದ್ದರೆ ನಾನು ಕ್ಷಮೆ ಕೇಳುತ್ತಿದ್ದೆ. ಎಂದೂ ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕ ವಿಚಾರಗಳನ್ನು ತೆಗೆದಿಲ್ಲ. ನನ್ನ ಜೀವನದಲ್ಲಿ ಯಾರಿಗೂ ಎಂದೂ ಬೇಜಾರು ಮಾಡಿಲ್ಲ ಎಂದು ಹೇಳಿದರು.

- Advertisement -

Latest Posts

Don't Miss