Sunday, September 8, 2024

Latest Posts

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

- Advertisement -

Cricket News: ಅಹಮದಾಬಾದ್‌: ಪ್ರಸ್ತುತ ಭಾರತದಲ್ಲಿ ಕ್ರಿಕೆಟ್‌ ವಿಶ್ವಕಪ್ ಸಂಭ್ರಮ ಮುಗಿಲು ಮುಟ್ಟಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿ ಕಾದಾಟ ನಡೆಸಲಿವೆ. ಈ ಹೈವೋಲ್ಟೇಜ್‌ ಕದನವನ್ನು ಕಣ್ತುಂಬಿಸಿಕೊಳ್ಳಲಿ ಇಡೀ ಕ್ರಿಕೆಟ್‌ ಜಗತ್ತು ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಫೈನಲ್‌ ಪಂದ್ಯದ ನಿಮಿತ್ತ ದೇಶದ ಆನ್‌ಲೈನ್‌ ಜೋತಿಷ್ಯ ಮುಂಚೂಣಿ ಸಂಸ್ಥೆಯಾದ ಆಸ್ಟ್ರೋಟಾಕ್‌ ಸಿಇಒ ಪುನೀತ್‌ ಗುಪ್ತಾ ಅವರು ತಮ್ಮ ಅಪ್ಲಿಕೇಷನ್‌ ಬಳಕೆದಾರರಿಗೆ ಬಂಪರ್‌ ಆಫರ್‌ ಘೋಷಿಸಿದ್ದಾರೆ.

ಬಹುನಿರೀಕ್ಷಿತ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ದ ಭಾರತ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಆಸ್ಟ್ರೋಟಾಕ್‌ ತನ್ನ ಗ್ರಾಹಕರ ವ್ಯಾಲೆಟ್‌ಗೆ 100 ಕೋಟಿ ರೂ. ಗಳನ್ನು ಸಮನಾಗಿ ವಿತರಿಸಲಾಗುತ್ತದೆ ಎಂದು ತಮ್ಮ ಲಿಂಕ್ಡ್‌ಇನ್‌ ಪೋಸ್ಟ್‌ನಲ್ಲಿ ಆಸ್ಟ್ರೋಟಾಕ್ ಸಿಇಒ ಪುನೀತ್‌ ಗುಪ್ತಾ ಈ ರೀತಿ ಬರೆದುಕೊಂಡಿದ್ದರೆ.

ನನ್ನ ಜೀವನದ ಅತ್ಯಂತ ಸ್ಮರಣೀಯ ದಿನ

“ಭಾರತ ತಂಡ 2011ರಲ್ಲಿ ವಿಶ್ವಕಪ್ ಗೆದ್ದಾಗ, ನಾನು ಆ ಸಮಯದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದೆ ಮತ್ತು ಅದು ನನ್ನ ಜೀವನದ ಸ್ಮರಣೀಯ ದಿನಗಳಲ್ಲಿ ಒಂದಾಗಿದೆ. ನಾನು ಚಂಡೀಗಢದ ಹತ್ತಿರದ ಕಾಲೇಜಿನ ಸಭಾಂಗಣದಲ್ಲಿ ನನ್ನ ಸ್ನೇಹಿತರೊಂದಿಗೆ ಆ ಪಂದ್ಯವನ್ನು ವೀಕ್ಷಿಸಿದ್ದೆ. ಇಡೀ ದಿನ ನಾವು ಒತ್ತಡದಲ್ಲಿದ್ದೆವು. ಫೈನಲ್‌ ಪಂದ್ಯದ ಹಿಂದಿನ ರಾತ್ರಿ ನಿದ್ರೆ ಮಾಡದೆ ತಂತ್ರಗಾರಿಕೆಯ ಬಗ್ಗೆ ಚರ್ಚೆ ನಡೆಸಿದ್ದೆವು. ಆದರೆ ನಾವು ಪಂದ್ಯವನ್ನು ಗೆದ್ದ ತಕ್ಷಣ, ಜಾಸ್ತಿ ಸಮಯ ಸಂಭ್ರಮಿಸಿದ್ದೆವು. ನಾನು ನನ್ನ ಸ್ನೇಹಿತರನ್ನು ಅಪ್ಪಿಕೊಂಡೆ. ನಾವು ಇಡೀ ಚಂಡೀಗಢವನ್ನು ಬೈಕ್‌ಗಳ ಮೂಲಕ ಸುತ್ತಿದ್ದೆವು ಮತ್ತು ಪ್ರತಿ ವೃತ್ತದಲ್ಲಿ ಅಪರಿಚಿತರೊಂದಿಗೆ ಭಾಂಗ್ರಾ ಪ್ರದರ್ಶಿಸಿದೆವು. ನಮ್ಮ ದಾರಿಗೆ ಬಂದವರನ್ನು ಅಪ್ಪಿಕೊಂಡೆವು. ಖಂಡಿತ, ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ,” ಎಂದು ಪುನೀತ್‌ ಗುಪ್ತಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ಈ ಬಾರಿ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಏನು ಮಾಡಬಹುದು ಎಂದು ನಾನು ಕಳೆದ ರಾತ್ರಿ ಯೋಚಿಸಿದೆ. ಕಳೆದ ಬಾರಿ ಭಾರತ ತಂಡ ವಿಶ್ವಕಪ್‌ ಗೆದ್ದಾಗ ಕೆಲ ಸ್ನೇಹಿತರು ಇದ್ದರು. ಆದರೆ, ಈ ಬಾರಿ ನನ್ನ ಬಳಿ ಸಾಕಷ್ಟು ಆಸ್ಟ್ರೋಟಾಕ್ ಬಳಕೆದಾರರು ಇದ್ದಾರೆ ಹಾಗೂ ಇವರೂ ಕೂಡ ನನ್ನ ಸ್ನೇಹಿತರಿದ್ದಂತೆ. ಹಾಗಾಗಿ ನನ್ನ ಸಂತೋಷವನ್ನು ಹಂಚಿಕೊಳ್ಳಲು ಅವರಿಗಾಗಿ ನಾನು ಏನಾದರೂ ಮಾಡಬೇಕು,” ಎಂದು ಹೇಳಿದ್ದಾರೆ.

“ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಗೆದ್ದರೆ ಆಸ್ಟ್ರೋಟಾಕ್‌ ಬಳಕೆದಾರರಿಗೆ 100 ಕೋಟಿ ರೂ. ಗಳನ್ನು ಹಂಚಬೇಕೆಂದು ಶನಿವಾರ ಬೆಳಿಗ್ಗೆ ನನ್ನ ಫೈನಾನ್ಸ್ ತಂಡಕ್ಕೆ ತಿಳಿಸಿದ್ದೇನೆ. ಭಾರತ ತಂಡ ವಿಶ್ವಕಪ್‌ ಗೆಲ್ಲಲಿ ಎಂದು ಪ್ರಾರ್ಥಿಸೋಣ, ಬೆಂಬಲ ನೀಡೋಣ. ಇಂಡಿಯಾ….ಇಂಡಿಯಾ!,” ಎಂದು ಪುನೀತ್‌ ಗುಪ್ತಾ ಬರೆದುಕೊಂಡಿದ್ದಾರೆ.

ಕ್ರಿಕೆಟ್ ಪ್ರೇಮಿಗಳ ಮದುವೆ – ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ

ಕೊಹ್ಲಿಯನ್ನು ಸ್ವಾರ್ಥಿ ಎಂದಿದ್ದವನಿಗೆ ಪಾಕ್ ತಂಡದ ಮುಖ್ಯ ಕೋಚ್ ಹುದ್ದೆ..!

ನಮ್ಮ ಹುಡುಗರ ಆಟವು ಚಂದ, ಗೆಲವಿನ ಹಠವೂ ಬಲು ಚಂದ: ಕ್ರಿಕೇಟ್‌ ತಂಡಕ್ಕೆ ಅಭಿನಂದಿಸಿದ ಡಿಕೆಶಿ

- Advertisement -

Latest Posts

Don't Miss