Monday, May 5, 2025

Latest Posts

ಶಕ್ತಿ ಯೋಜನೆ ಎಫೆಕ್ಟ್..? ಸೀಟ್ ಸಿಗದೇ, ಡ್ರೈವರ್ ಸೀಟ್‌ನಲ್ಲಿ ಕುಳಿತ ವ್ಯಕ್ತಿ..

- Advertisement -

Vijayanagara News: ವಿಜಯನಗರ: ಶಕ್ತಿ ಯೋಜನೆ ಜಾರಿಿಗೆ ಬಂದಾಗಿಂದ ಹಲವು ಮಹಿಳೆಯರು ತಮ್ಮ ತಮ್ಮ ಕೆಲಸಗಳಿಗೆ ಹೋಗಲು ಬಹಳ ಅನುಕೂಲವಾಗಿದೆ. ಇನ್ನು ಕೆಲವರು ಟ್ರಿಪ್ ಹೋಗುತ್ತಿದ್ದಾರೆ. ಆದರೆ ವಿಜಯನಗರದಲ್ಲಿ ಇದರ ಎಫೆಕ್ಟ್ ಜೋರಾಗಿದೆ. ಸರಿಯಾಗಿ ಸೀಟ್ ಸಿಗದ ಕಾರಣ, ವ್ಯಕ್ತಿಯೋರ್ವ, ಡ್ರೈವರ್ ಸೀಟ್‌ನಲ್ಲಿ ಬಂದು ಕುಳಿತಿದ್ದಾನೆ.

ವಿಜಯನಗರದ ಹಗರಿಬೊಮ್ಮನಹಳ್ಳಿಯ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ಮತ್ತು, ಬಸ್ ಡ್ರೈವರ್‌ನನ್ನು ಕೆಳಗಿಳಿಸಿ, ಜನ ಬಸ್ ಹತ್ತಿದ್ದಾರೆ. ಈ ಬಸ್ ಹಗರಿಬೊಮ್ಮನಹಳ್ಳಿಯಿಂದ ಮುತ್ಕೂರಿಗೆ ಹೊರಟಿತ್ತು. ಆಗ ಕಂಡಕ್ಟರ್ ಮತ್ತು ಡ್ರೈವರ್‌ಗೂ ಜಾಗ ಬಿಡದ ಪ್ರಯಾಣಿಕರು, ಬಸ್ ಭರ್ತಿ ಮಾಡಿದ್ದಾರೆ. ಒಂದೇ ಬಸ್‌ಗೆ 70ಕ್ಕೂ ಹೆಚ್ಚು ಪ್ರಯಾಣಿಕರು ಏರಿ ಕುಳಿತಿದ್ದು, ಪ್ರಯಾಣಿಕರ ನೂಕುನುಗ್ಗಲಿಗೆ ಡ್ರೈವರ್-ಕಂಡಕ್ಟರ್ ಹೈರಾಣಾಗಿದ್ದಾರೆ.

- Advertisement -

Latest Posts

Don't Miss