Dharwad News: ಧಾರವಾಡ: ಧಾರವಾಡದಿಂದ ಕಾಂಗ್ರೆಸ್ ಪಕ್ಷದ ಪ್ರಬಲ್ ಟಿಕೇಟ್ ಆಕಾಂಕ್ಷಿಯಾಗಿದ್ದ ರಜತ್ ಉಳ್ಳಾಗಡ್ಡಿಗೆ ಟಿಕೇಟ್ ಮಿಸ್ ಆಗುತ್ತಿದ್ದಂತೆ, ಅವರು ಸೈಡ್ಲೈವನ್ ಆಗುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ನಿಂದ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ವಿನೋದ್ ಅಸೋಟಿಗೆ ಟಿಕೇಟ್ ನೀಡಲಾಗಿದೆ. ಕಳೆದ ಬಾರಿ, ವಿಧಾನಸಭಾ ಚುನಾವಣೆಯಲ್ಲಿ ರಜತ್ಗೆ ಟಿಕೇಟ್ ಸಿಗುತ್ತದೆ ಎಂದುಕೊಂಡಿದ್ದರೂ ಕೂಡ, ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿದ್ದ ಜಗದೀಶ್ ಶೆಟ್ಟರ್ಗೆ ಟಿಕೇಟ್ ಕೊಡಲಾಗಿತ್ತು. ಹೈಕಮಾಂಡ್ ಸೂಚನೆಯಂತೆ ಆ ವೇಳೆ ರಜತ್, ಶೆಟ್ಟರ್ ಪರ ಕ್ಯಾಂಪೇನ್ ಮಾಡಿದ್ದರು.
ಇದೀಗ ಲೋಕಸಭೆ ಚುನಾವಣೆ ಹೊತ್ತಲ್ಲಿ, ರಜತ್ಗೆ ಟಿಕೇಟ್ ಮಿಸ್ ಆದರೂ ಕೂಡ, ಅವರು ಕಾಂಗ್ರೆಸ್ ಗೆಲ್ಲಬೇಕೆಂದು ಕ್ಯಾಂಪೇನ್ ನಡೆಸುತ್ತಿದ್ದಾರೆ. ಆದರೂ ಕೂಡ ರಜತ್ರನ್ನು ಮೂಲೆಗುಂಪು ಮಾಡಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಇಂದು ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸಭೆ ನಡೆದಿದ್ದು, ರಜತ್ ಸಭೆಯ ಮುಖ್ಯ ವೇದಿಕೆಯ ಮೂಲೆಯಲ್ಲಿ ಕುಳಿತುಕುೊಂಡಿದ್ದರು. ರಜತ್ ಅವರಿಗೆ ಪಕ್ಷದ ಬಗ್ಗೆ ಪರೋಕ್ಷವಾಗಿ ಅಸಮಾಧಾನವಿದ್ದರೂ ಕೂಡ, ರಜತ್ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಮೋದಿಯವರು ಪ್ರಧಾನಮಂತ್ರಿ ಆಗಲಿ ಎಂದು ಲಕ್ಷ್ಮೀನರಸಿಂಹ ಸ್ವಾಮಿಯಲ್ಲಿ ಕೇಳಿದ್ದೇನೆ: ಹೆಚ್.ಡಿ.ರೇವಣ್ಣ
ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ: ಸಚಿವ ಸಂತೋಷ್ ಲಾಡ್
ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..