Sunday, June 1, 2025

Latest Posts

Spiritual: ಮುಖ್ಯದ್ವಾರದ ಬಳಿ ಈ ವಸ್ತುವನ್ನೆಂದೂ ಇರಿಸಬೇಡಿ..

- Advertisement -

Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಇದ್ದರೆ, ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಡುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಮನೆಯ ಮುಖ್ಯದ್ವಾರದಲ್ಲಿ ಏನೇನು ಇರಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ.

ಮನೆಯ ಮುಖ್ಯದ್ವಾರದಲ್ಲಿ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತದೆ. ಮತ್ತು ಲಕ್ಷ್ಮೀ ದೇವಿ ಮನೆಯಲ್ಲಿದ್ದಾಗಲೇ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಅಂಥ ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲೂ ನೆಲೆಸಬೇಕು ಅಂದ್ರೆ, ನೀವು ಮನೆಯ ಮುಖ್ಯದ್ವಾರದಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು.

ನಾವು ಮುಖ್ಯದ್ವಾರದಲ್ಲಿ ಚಪ್ಪಲಿ ಬಿಡಬಾರದು. ಕಸ ಹಾಕಬಾರದು. ಹೀಗೆ ಮಾಡಿದ್ದಲ್ಲಿ ಮನೆಯಲ್ಲಿ ಜಗಳ, ಹಣದ ಸಮಸ್ಯೆ, ಆರೋಗ್ಯ ಸಮಸ್ಯೆ ಎಲ್ಲವೂ ಬರುತ್ತದೆ. ಇದರಿಂದಲೇ ನೆಮ್ಮದಿ ಹಾಳಾಗುತ್ತದೆ. ಯಾವ ರೀತಿ ಹಣ ಖರ್ಚಾಗುತ್ತದೆ ಅಂತಲೇ ಗೊತ್ತಾಗುವುದಿಲ್ಲ. ಅಷ್ಟು ಹಣದ ಸಮಸ್ಯೆ ುದ್ಭವಿಸುತ್ತದೆ. ಹಾಗಾಗಿ ಮನೆಯ ಮುಖ್ಯ ದ್ವಾರದ ಬಳಿ ಚಪ್ಪಲಿ ಬಿಡಬಾರದು. ಸ್ವಚ್ಛವಾಗಿ ಇರಿಸಿಕೊಳ್ಳಬೇಕು.

ಮನೆಯ ಮುಂದೆ ಚಪ್ಪಲಿ ಇರಿಸಿದರೆ, ಲಕ್ಷ್ಮೀ ದೇವಿ ಬರಲು ಅಡ್ಡ ಮಾಡಿದಂತಾಗುತ್ತದೆ. ಇದೆಲ್ಲ ಕೆಲವರಿಗೆ ಮೂಢ ನಂಬಿಕೆ ಅನ್ನಿಸಿದರೂ, ಇದರ ಪರಿಣಾಮ ಅನುಭವಿಸಿದವರಿಗೆ ಇದರ ಅರಿವಿರುತ್ತದೆ. ಬರೀ ಚಪ್ಪಲಿ ಇಡುವುದಷ್ಟೇ ಅಲ್ಲ, ದ್ವಾರದ ಬಳಿ ಯಾವ ವಸ್ತುವನ್ನೂ ನೀವು ಇರಿಸಿಬಾರದು. ಕೆಲವು ಹೆಂಗಸರಿಗೆ ಹೊಸ್ತಿಲ ಮೇಲೆ ಕುಳಿತು, ಹರಟೆ ಹೊಡೆಯುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಇಂಥ ಅಭ್ಯಾಸದಿಂದಲೇ, ಮನೆಯಲ್ಲಿ ನೆಮ್ಮದಿ ಹಾಳಾಗುವುದು, ಆರ್ಥಿಕ ಪರಿಸ್ಥಿತಿ ಹದಗೆಡುವುದೆಲ್ಲ ಆಗುತ್ತದೆ.

ಇನ್ನು ರಾಹು ಗ್ರಹವು ಹೊಸ್ತಿಲಿನಲ್ಲಿ, ಮುಖ್ಯ ದ್ವಾರದ ಬಳಿ ನೆಲೆಸಿರುತ್ತದೆ ಅಂತಾ ಹೇಳಲಾಗಿದೆ. ನೀವು ಹೊಸ್ತಿಲ ಬಳಿ, ಮುಖ್ಯ ದ್ವಾರದ ಬಳಿ ಚಪ್ಪಲಿ ಇರಿಸಿದರೆ, ರಾಹು ದೋಷಕ್ಕೆ ಒಳಗಾಗಬಹುದು. ಇದರಿಂದ ನೀವು ಅತ್ಯಂತ ಕೆಟ್ಟದಾಗಿ ಆರ್ಥಿಕ ಸಮಸ್ಯೆಗೆ ಒಳಗಾಗಬಹುದು. ಹಾಗಾಗಿ ಮುಖ್ಯದ್ವಾರದ ಬಳಿ ಸ್ವಚ್ಛಗೊಳಿಸಿ, ಸಾಧ್ಯವಾದರೆ ರಂಗೋಲಿ ಹಾಕಿ. ಆದರೆ ಯಾವುದೇ ಕಾರಣಕ್ಕೂ ಚಪ್ಪಲಿ ಇರಿಸಬೇಡಿ.

- Advertisement -

Latest Posts

Don't Miss