Tuesday, May 14, 2024

Latest Posts

ಇಸ್ಲಾಮಿಕ್ ಪವರ್ ಎಂದವನ ಮನೆಗೆ ಹೋಗಿ ರಾಮಮಂದಿರಕ್ಕೆ ಆಹ್ವಾನ ನೀಡಲು ನಿರ್ಧರಿಸಿದ ಶ್ರೀರಾಮಸೇನೆ

- Advertisement -

Dharwad News: ಧಾರವಾಡ: ರಾಮಮಂದಿರದ ಚಿತ್ರದ ಮೇಲೆ ಹಸಿರು ಬಾವುಟವನ್ನು ಇರಿಸಿ, ಫೋಟೋ ಎಡಿಟ್ ಮಾಡಿ, ಅದನ್ನು ಸ್ಟೇಟಸ್‌ಗೆ ಇಡುವುದಲ್ಲದೇ, ಇಸ್ಲಾಮಿಕ್ ಪವರ್ ತೋರಿಸುತ್ತೇನೆ ಎಂದು ಯುವಕನೋರ್ವ ಬರೆದುಕೊಂಡಿದ್ದಾನೆ.

ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಸದ್ದಾಂಹುಸೇನ್ ಇಸ್ಮಾಯಿಲ್ ಸಾಬ್ ನದಾಫ್ ಈ ರೀತಿಯಾಗಿ ಸ್ಟೇಟಸ್ ಇಟ್ಟುಕೊಂಡಿದ್ದಾನೆ. ಇವನ ಈ ಕೆಲಸಕ್ಕೆ ಗರಗ ಪೊಲೀಸ್ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ, ಬಂಧಿಸಿ, ಜೈಲಿಗಟ್ಟಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಇವನು ಸ್ಟೇಟಸ್ ಹಾಕಿದ್ದ ಸಲುವಾಗಿ, ಇವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನು ಈ ಯುವಕನ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಇದೇ ಜನವರಿ 30ರಂದು ಆ ಯುವಕನ ಮನೆಗೆ ಹೋಗಿ, ನಾವೇ ಖರ್ಚು ಕೊಟ್ಟು ಅಯೋಧ್ಯೆಗೆ ಕರೆದೊಯ್ಯುತ್ತೇವೆ. ಅಲ್ಲಿ ಬಂದು ಹಸಿರು ಧ್ವಜ ಹಾರಿಸು ಎಂದು ಆ ಯುವಕನಿಗೆ ಚಾಲೆಂಜ್‌ ಮಾಡಬೇಕು ಎಂದು ಶ್ರೀರಾಮಸೇನೆ ನಿರ್ಧರಿಸಿದೆ.

ತಸ್ತೀಕ್ ಹಣ ವಾಪಾಸ್ ಕೇಸ್: ತಹಶೀಲ್ದಾರರದ್ದೇ ತಪ್ಪು, ಕಣ್ಣನ್ ಅವರ ತಪ್ಪಿಲ್ಲವೆಂದ ಸಿಎಂ

ಇಂಡಿಯಾ ಒಕ್ಕೂಟದಿಂದ ಹೊರಬಂದ ಟಿಎಂಸಿ: ಲೋಕಸಭೆ ಚುನಾವಣೆ ಏಕಾಂಗಿಯಾಗಿ ಎದುರಿಸಲು ನಿರ್ಧಾರ

ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್

- Advertisement -

Latest Posts

Don't Miss