Saturday, May 17, 2025

Latest Posts

Suhas Case: ಹಿಂದೂ ಕಾರ್ಯಕರ್ತರ ವಿರುದ್ಧ ಪೇದೆ ರಶೀದ್ ದೂರು

- Advertisement -

Mangaluru News: ಮಂಗಳೂರಿನಲ್ಲಿ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೇದೆ ರಶೀದ್ ಎಂಬುವವರು ಕೂಡ ಭಾಗಿಯಾಗಿದ್ದಾರೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದರು. ಏಕೆಂದರೆ, ಸುಹಾಸ್ ಹತ್ಯೆಗೂ ಕೆಲ ದಿನಗಳ ಮುನ್ನ ರಶೀದ್, ಸುಹಾಸ್‌ಗೆ ನೀನು ನಿನ್ನ ಗೆಳೆಯರೋಂದಿಗೆ ಓಡಾಡಬಾರದು. ನಿನ್ನ ಬಳಿ ಯಾವುದೇ ಆಯುಧ ಇರಿಸಿಕ“ಂಡಿರಬಾರದು ಎಂದು ಹೇಳಿದ್ದರು. ಹೀಗಾಗಿ ರಶೀದ್ ಕೂಡ ಈ ಕೇಸ್‌ನಲ್ಲಿ ಭಾಗಿಯಾಗಿದ್ದಾನೆಂದು ಹಿಂದೂ ಕಾರ್ಯಕರ್ತರು ನೇರಾನೇರ ಆರೋಪ ಮಾಡಿದ್ದರು.

ಈ ಕಾರಣಕ್ಕೆ ರಶೀದ್ ಅವರು ಬಜ್ಪೆ ಪೋಲೀಸ್ “station ನಲ್ಲಿ ದೂರು ದಾಖಲಿಸಿದ್ದಾರೆ,. ಹಿಂದೂ ಜಾಗರಣಾ ವೇದಿಕೆಯವರು ಈ ರೀತಿ ಆರೋಪ ಮಾಡಿದ್ದು, ಸಮಾಜಿಕ ಜಾಲತಾಣದಲ್ಲಿ ರಶೀದ್ ವಿರುದ್ಧ ಅವಹೇಳನಕಾರಿ Post ಹಾಾಕಲಾಗಿತ್ತು. ಈ ಕಾರಣಕ್ಕೆ ರಶೀದ್ ದೂರು ದಾಖಲಿಸಿದ್ದಾರೆ.

ಈ ಕೇಸ್‌ನಲ್ಲಿ ವಿನಾಕಾರಣ ನನ್ನ ಹೆಸರು ತಂದಿದ್ದಾರೆ. ಯಾವುದೇ ಆಧಾರವಿಲ್ಲದೇ, ನನ್ನ ಹೆಸರು ಹಾಕಿ ಆರೋಪ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನನ್ನ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದು ರಶೀದ್ ಆರೋಪಿಸಿದ್ದಾರೆ. ಈ ಕಾರಣಕ್ಕೆ ಬಜ್ಪೆ Police Station ನಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

Latest Posts

Don't Miss