Monday, June 2, 2025

Latest Posts

ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಜಮಾತ್ ನಾಯಕ ರಜಾಕರ್‌ಗೆ ಸುಪ್ರೀಂನಿಂದ ಖುಲಾಸೆ

- Advertisement -

Dhaka News: ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ, ಅತ್ಯಾಚಾರ ಸೇರಿ ಇತರೇ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಜಮಾತ್ ನಾಯಕ ರಜಾಕರ್ ಅಜರುಲ್ ಇಸ್ಲಾಂನನ್ನು ಬಾಂಗ್ಲಾದೇಶ ಸುಪ್ರಿಂಕೋರ್’’್ ಖುಲಾಸೆಗ“ಳಿಸಿದೆ.

ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ರಜಾಕರ್‌ನನ್ನು 2012ರಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನಿ ಸೈನ್ಯದ ಜತೆ ಸೇರಿ 1,256 ಜನರನ್ನು ಹತ್ಯೆ ಮಾಡಿರುವ, 17 ಜನರನ್ನು ಅಪಹರಿಸಿರುವ ಮತ್ತು 13 ಮಹಿಳೆಯರನ್ನು ಅತ್ಯಾಚಾರ ಮಾಡಿರುವ ಆರೋಪ ಇವನ ಮೇಲಿದೆ. ಅಲ್ಲದೇ ಹಲವರಿಗೆ ಚಿತ್ರಹಿಂಸೆ ಮಾಡಿದ್ದನೆಂದು ಆರೋಪವಿದೆ.

ಈ ಎಲ್ಲ ಅಪರಾಧಗಳೂ ಸಾಬೀತಾಗಿದ್ದು, 2014ರಲ್ಲಿ ಅಂತರಾಷ್’’‌ರೀಯ ಅಪರಾಧ ನ್ಯಾಯಮಂಡಳಿ ಅವನನ್ನು ದೋಷಿ ಎಂದು ಘೋಷಿಸಿತು. ಅಕ್ಟೋಬರ್ 2019ರಲ್ಲಿ ಸುಪ್ರಿಂಕೋರ್ಟ್ ಮೇಲ್ಮನವಿ ವಿಭಾಗವು ಆತನ ಮರಣದಂಡನೆಯನ್ನು ಎತ್ತಿಹಿಡಿಯಿತು.

ಈ ವರ್ಷದ ಫೆಬ್ರವರಿಯಲ್ಲಿ ಸುಪ್ರಿಕೋರ್ಟ್ ರಜಾಕರ್‌ಗೆ ತಪ್ಪಿತಸ್ಥ ತೀರ್ಪನ್ನು ಪ್ರಶ್ನಿಸಲು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಈ ಹಿಂದೆ ಶಿಕ್ಷೆ ಮತ್ತು ಮರಣದಂಡನೆಯನ್ನು ಎತ್ತಿ ಹಿಡಿದಿದ್ದ ಮೇಲ್ಮನವಿ ವಿಭಾಗವು ಈ ಉಗ್ರನನ್ನು ಖುಲಾಸೆಗ“ಳಿಸಿದೆ.

ಇನ್ನು ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತನಿಖೆಯ ಪ್ರಕಾರ ರಜಾಕರ್ ಅಜರುಲ್ ಇಸ್ಲಾಂ 1971ರ ಏಪ್ರಿಲ್ 16ರಂದು ಮೋಕ್ಸೇದ್‌ಪುರ ಎಂಬ ಗ್ರಾಮದ ಮೇಲೆ ದಾಳಿ ಮಾಡಿದ್ದ. ಅಲ್ಲಿನ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿ, ಅಲ್ಲಿನ ಮನೆಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಿದ್ದ. ಪಾಕಿಸ್ತಾನ ಸೈನ್ಯ ಮತ್ತು ಜಮಾತ್ ನಾಯಕರ ಜತೆ ಸೇರಿ, ರಜಾಕರ್ ಈ ಕೆಲಸ ಮಾಡಿದ್ದ.

ಅಲ್ಲದೇ, ಈತ ಅದೆಷ್ಟು ಕ್ರೂರಿ ಎಂದರೆ, ನಾಲ್ವರು ಪ್ರಾಧ್ಯಾಪಕರು ಮತ್ತು ಅದರಲ್ಲಿ ಓರ್ವ ಪ್ರಾಧ್ಯಾಪಕರ ಪತ್ನಿಯನ್ನು ಕರೆತಂದು ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದ. ಏಕೆಂದರೆ ಅವರೆಲ್ಲ ಹಿಂದೂಗಳಾಗಿದ್ದರು.

1971ರಲ್ಲಿ ಅತ್ಯಾಚಾರದ ಶಿಬಿರ ನಡೆಸಿ, ಅಲ್ಲಿ ಅಪಹರಿಸಿದ ಮಹಿಳೆಯರನ್ನು ತಂದರಿಸಿ, ಅವರಿಗೆ ವಿಚಿತ್ರವಾದ ಹಿಂಸೆಗಳನ್ನು ನೀಡುತ್ತಿದ್ದ. ವಿಕೃತ ಕಾಮಿಯ ರೀತಿ ವರ್ತಿಸಿ, ಅವರ ಮೇಲೆ ಅತ್ಯಾಚರ ಎಸಗುತ್ತಿದ್ದ. ಇಂಥ ಪಾಪಿಯನ್ನು ಬಾಂಗ್ಲಾ ಸುಪ್ರೀಂಕೋರ್ಟ್ ಖುಲಾಸೆಗಳಿಸಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.

- Advertisement -

Latest Posts

Don't Miss