Hassan News: ಬೇಲೂರು: ಪಾರ್ಟಿ ಮುಗಿಸಿ, ಕಾರಿನಲ್ಲಿ ಮಲಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೋಷಕರು ಕೊಲೆ ಆರೋಪ ಮಾಡಿದ್ದಾರೆ.
ಬೇಲೂರಿನ ಕುವೆಂಪು ನಗರದಲ್ಲಿ ಈ ಘಟನೆ ನಡೆದಿದ್ದು, ಮೃತನನ್ನು ಚೇತನ್ (24) ಎಂದು ಗುರುತಿಸಲಾಗಿದೆ. ಬೇಲೂರು ತಾಲೂಕಿನ ಕೊನೆರ್ಲು ಗ್ರಾಮದ ಹರೀಶ್ ಎಂಬುವ ಪುತ್ರ ಚೇತನ್, ಪಟ್ಟಣದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಶನಿವಾರ ರಾತ್ರಿ ಮೊಬೈಲ್ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಜೊತೆ ಪಾರ್ಟಿಗೆ ತೆರಳಿದ್ದ. ರಾತ್ರಿ ಹನ್ನೆರಡು ಗಂಟೆಯವರೆಗೆ, ಗೌತಮ್ ರೂಂ ಪಕ್ಕದಲ್ಲಿ ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡಿದ್ದಾರೆ.
ಪಾರ್ಟಿ ಮುಗಿದ ನಂತರ ಮನೆಗೆ ದರ್ಶನ್, ಮಿಥುನ್, ಗೌತಮ್ ಮನೆಗೆ ತೆರಳಿದ್ದಾರೆ. ಆದರೆ ಮನೆಗೆ ತೆರಳಲಾಗದೇ, ಚೇತನ್ ಕಾರಿನಲ್ಲಿ ಮಲಗಿದ್ದಾನೆ. ಕಾರ್ ಗೌತಮ್ ಮನೆ ಎದುರೇ ನಿಂತಿದ್ದರಿಂದ, ಬೆಳಿಗ್ಗೆ 10 ಗಂಟೆಗೆ ಎದ್ದು ಬಂದ ಗೌತಮ್, ಕಾರ್ ಡೋರ್ ತೆಗೆದಿದ್ದಾನೆ. ಆಘ ಕಾರಿನ ಹಿಂಬದಿ ಸೀಟ್ನಲ್ಲಿ ಚೇತನ್ ಮಲಗಿದ್ದಲ್ಲೇ, ರಕ್ತ ವಾಂತಿ ಮಾಡಿದ್ದು ಕಂಡು ಬಂದಿದೆ.
ಆ ತಕ್ಷಣ ಗೌತಮ್, ದರ್ಶನ್, ಮಿಥುನ್ಗೆ ಫೋನ್ ಮಾಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ, ದರ್ಶನ್ ಮತ್ತು ಮಿಥುನ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಹೀಗಾಗಿ ಗೌತಮ್ ಕಾರಿನಲ್ಲಿದ್ದ ಶವ ಸಮೇತ, ಪೊಲೀಸ್ ಠಾಣೆಗೆ ತೆರಳಿದ್ದಾನೆ. ವಿಷಯ ತಿಳಿದು ಚೇತನ್ ಪೋಷಕರು ಪೊಲೀಸ್ ಠಾಣೆಗಾಗಿ ನನ್ನ ಮಗನ ಸಾವು ಅಸಹಜ ಸಾವಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಉತ್ತಮ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ರೂಪಿಸಲಿ’
ಮೂಲಭೂತ ಸೌಕರ್ಯಕ್ಕೆ ಆಗ್ರಹ: ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು…
ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸುವ ವ್ಯಕ್ತಿ ನಾನು: ಶಾಸಕ ಹೆಚ್.ಕೆ.ಸುರೇಶ್