Thursday, July 23, 2026

karnataka newz

‘ಇಬ್ಬರನ್ನು ಅನರ್ಹಗೊಳಿಸಿ- ಎಲ್ಲರೂ ವಾಪಸ್ ಬರ್ತಾರೆ’- ಕಾಂಗ್ರೆಸ್ ಪಟ್ಟು..!

ಬೆಂಗಳೂರು: ಮರು ರಾಜೀನಾಮೆ ನೀಡಿ ಮತ್ತೆ ಮುಂಬೈಗೆ ತೆರಳಿ ದೋಸ್ತಿಗಳಿಗೆ ತಲೆನೋವು ತಂದಿಟ್ಟಿರೋ ಶಾಸಕರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಹೀಗಾಗಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ್ರೆ ಉಳಿದವರೆಲ್ಲರೂ ವಾಪಸ್ ಬರ್ತಾರೆ ಅಂತ ಪಟ್ಟು ಹಿಡಿದಿದೆ. ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡು ಬಂಡಾಯವೆದ್ದು ಪಟಾಲಂ ಕಟ್ಟಿಕೊಂಡು ಸರ್ಕಾರವನ್ನು ಪತನದಂಚಿಗೆ ದೂಡಲು ಕಾರಣವಾದ ಮಾಸ್ಟರ್ ಮೈಂಡ್ ಶಾಸಕ ರಮೇಶ್...

ಅತೃಪ್ತರನ್ನು ಬಗ್ಗುಬಡಿಯಲು ಎಸಿಬಿ ಅಸ್ತ್ರ…!

ಬೆಂಗಳೂರು: ದೋಸ್ತಿಗಳಿಗೆ ತಲೆನೋವಾಗಿರೋ ಅತೃಪ್ತರನ್ನು ಹೇಗಾದ್ರೂ ಮಾಡಿ ಮಟ್ಟ ಹಾಕಲು ಹಪಹಪಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇದೀಗ ಎಸಿಬಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ. ದೋಸ್ತಿಗಳ ಸಲಹೆ, ಮನವೊಲಿಕೆಯನ್ನು ಧಿಕ್ಕರಿಸಿ ಮುಂಬೈನಿಂದ ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ಸಲ್ಲಿಸಿ ಪುನಃ ಮುಂಬೈ ಸೇರಿರುವ ಶಾಸಕರಲ್ಲಿ 4 ಮಂದಿ ಮೇಲೆ ಸರ್ಕಾರ ಎಸಿಬಿ ಅಸ್ತ್ರ...

ಕರ್ನಾಟಕ ಬಿಕ್ಕಟ್ಟು- ಇತಿಹಾಸದಲ್ಲಿ ಇದೇ ಮೊದಲು- ಬಿಜೆಪಿ ಎಂಎಲ್ ಸಿ

ಬೆಂಗಳೂರು: ಬಹುಮತವಿಲ್ಲದ ಸರ್ಕಾರವನ್ನು ವಿಪಕ್ಷ ಎದುರಿಸುತ್ತಿರೋದು ಇದೇ ಮೊದಲು ಅಂತ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶಾಸಕರ ಸರಣಿ ರಾಜೀನಾಮೆಯಿಂದ ದೃತಿಗೆಡದ ದೋಸ್ತಿ ಸರ್ಕಾರ ಇಂದು ವಿಧಾನಮಂಡಲ ಅಧಿವೇಶನ ನಡೆಸುತ್ತಿದೆ. ಇದು ಸಹಜವಾಗಿಯೇ ಬಿಜೆಪಿ ಆರೋಪಗಳಿಗೆ ಗುರಿಯಾಗಿದ್ದು, ದೋಸ್ತಿಗಳ ವಿರುದ್ಧ ಟೀಕಾಸ್ತ್ರ ಪ್ರಯೋಗ ಮುಂದುವರಿದಿದೆ. ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್...

‘ಮಿಂಚಿನ ವೇಗದಲ್ಲಿ ಕೆಲಸ ಮಾಡ್ಬೇಕಿತ್ತಾ?’- ಸ್ಪೀಕರ್ ಪ್ರಶ್ನೆ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ವಿಳಂಬ ನೀತಿ ಅನುಸರಿಸಿದ್ರು ಅನ್ನೋ ಬಿಜೆಪಿ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. ನಿಯಮಾವಳಿಗಳನ್ನೆಲ್ಲಾ ಬದಿಗಿಟ್ಟು ನಾನು ಮಿಂಚಿನ ವೇಗದಲ್ಲಿ ಕೆಲಸ ಮಾಡಬೇಕಿತ್ತಾ ಅಂತ ಪ್ರಶ್ನಿಸಿದ್ದಾರೆ. ಅತೃಪ್ತ ಶಾಸಕರನ್ನು ಖುದ್ದು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಕಳೆದ ಶನಿವಾರದಂದು ನಾನು 12.45ರ ವೇಳೆ ಕಚೇರಿಯಿಂದ...

ಮತ್ತೆ ರಾಜೀನಾಮೆ ಸಲ್ಲಿಸಿ ಪುನಃ ಮುಂಬೈನತ್ತ ತೆರಳಿದ ಅತೃಪ್ತ ಶಾಸಕರು

ಬೆಂಗಳೂರು: 13 ಶಾಸಕರ ರಾಜೀನಾಮೆ ಪತ್ರಗಳ ಪೈಕಿ 8 ಮಂದಿಯ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದು ಹೇಳಿದ ಹಿನ್ನೆಲೆ ಹಾಗೂ ಸುಪ್ರೀಂನ ಆದೇಶದಂತೆ ಇಂದು ಮುಂಬೈನಿಂದ ಬಂದ ಅತೃಪ್ತ ಶಾಸಕರು ಮತ್ತೆ ರಾಜೀನಾಮೆ ಸಲ್ಲಿಸಿದರು. ಮುಂಬೈನಿಂದ ವಿಶೇಷ ವಿಮಾನದ ಮೂಲಕ ವಿಧಾನಸೌಧದಲ್ಲಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ರನ್ನು ಭೇಟಿ ಮಾಡಿದ ಅತೃಪ್ತ ಶಾಸಕರಾದ, ಬೈರತಿ ಬಸವರಾಜ್, ರಮೇಶ್...

ಅತೃಪ್ತರು-ಸ್ಪೀಕರ್ ಭೇಟಿ ಹಿನ್ನೆಲೆ- ಖಾಕಿಮಯವಾದ ವಿಧಾನಸೌಧ…!

ಬೆಂಗಳೂರು: ವಿಧಾನಸೌಧದ ಸ್ಪೀಕರ್ ಕಚೇರಿಗೆ ಅತೃಪ್ತ ಶಾಸಕರು ಭೇಟಿ ನೀಡುತ್ತಿರೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಕ್ತಿ ಸೌಧದ ದೊಳಕ್ಕೆ ಸಾರ್ವಜನಿಕರಲ್ಲದೆ ರಾಜಕೀಯ ಮುಖಂಡರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ. ಮುಂಬೈನಿಂದ ಆಗಮಿಸುತ್ತಿರೋ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಕುರಿತಾಗಿ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಹಾಗೂ ಭದ್ರತಾ...

ಎಲ್ಲಾ 16 ಶಾಸಕರ ಅನರ್ಹತೆಗೆ ಅರ್ಜಿ..!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟಿಗೆ ಕಾರಣರಾದ ಅತೃಪ್ತರಿಗೆ ಪಾಠ ಕಲಿಸಲು ದೋಸ್ತಿ ಮುಂದಾಗಿದ್ದು ಇದೀಗ ಎಲ್ಲಾ 16 ಮಂದಿ ಶಾಸಕರ ಅನರ್ಹತೆ ಕೋರಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರು ಸುಪ್ರೀಂ ನೀಡಿರೋ ಸೂಚನೆಯಂತೆ ಮುಂಬೈನಿಂದ ಬೆಂಗಳೂರಿಗೆ ಸ್ಪೀಕರ್ ಭೇಟಿಯಾಗಲು ತೆರಳುತ್ತಿದ್ದಂತೆ ದೋಸ್ತಿಗಳು ಇದೀಗ ಅವರಿಗೆ ಮತ್ತೊಂದು ಶಾಕ್ ನೀಡಿದೆ....

‘ನಾನು ಸರ್ಕಾರ ಬಿಟ್ಟುಕೊಡಲ್ಲ- ಎಲ್ಲರೂ ಒಟ್ಟಾಗಿ ನಿಲ್ಲೋಣ’- ಸಿಎಂ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಉಂಟಾಗಿರೋ ಬಿಕ್ಕಟ್ಟು ಪರಿಹಾರಕ್ಕಾಗಿ ದೋಸ್ತಿಗಳು ನಾನಾ ರೀತಿಯ ತಂತ್ರಗಳ ಮೊರೆ ಹೋಗಿದ್ದಾರೆ. ಇಂದು ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ನಾನು ಸರ್ಕಾರ ಬಿಡೋದಿಲ್ಲ, ಎಲ್ಲರೂ ಒಗ್ಗಟ್ಟಾಗಿ ನಿಲ್ಲೋಣ ಅಂತ ಸಂಪುಟ ಸಹೋದ್ಯೋಗಿಗಳಲ್ಲಿ ಮನವಿ ಮಾಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಬಿಕ್ಕಟ್ಟು ಎದುರಾಗುತ್ತಿದ್ದಂತೆಯೇ ದಿನೇ ದಿನೇ ರಾಜಕೀಯ...

ವರಸೆ ಬದಲಿಸಿದ ಸ್ಪೀಕರ್- ಸಂಜೆಗೆ ರಾಜೀನಾಮೆ ಇತ್ಯರ್ಥ ಅಸಾಧ್ಯ- ಸುಪ್ರೀಂಗೆ ಅರ್ಜಿ..!

ಬೆಂಗಳೂರು: ಶಾಸಕರ ರಾಜೀನಾಮೆ ರಗಳೆ ಮತ್ತೊಂದು ತಿರುವು ಪಡೆದಿದೆ. ಇಂದೇ ರಾಜೀನಾಮೆ ಬಗ್ಗೆ ಇತ್ಯರ್ಥ ಮಾಡಬೇಕು ಅನ್ನೋ ನಿರ್ದೇಶನ ಕುರಿತಾಗಿ ವಿಧಾನಸಭೆ ಸಭಾಪತಿ ರಮೇಶ್ ಕುಮಾರ್ ಇದೀಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕಾಲಾವಕಾಶ ಕೋರಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ರಗಳೆ ಸದಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇಂದೇ ಅತೃಪ್ತ ಶಾಸಕರನ್ನು ಖುದ್ದು...

ಸಂಸತ್ ಎದುರು ಸೋನಿಯಾ ಗಾಂಧಿ, ರಾಹುಲ್ ಪ್ರತಿಭಟನೆ

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಬಿಜೆಪಿ ಕಾರಣ ಅಂತ ಆರೋಪಿಸಿ ಸಂಸತ್ ಭವನದೆದುರು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ರು. ಕರ್ನಾಟದಲ್ಲಿ ದೋಸ್ತಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಕುತಂತ್ರ ಮಾಡಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದು ಕುತಂತ್ರ ಮಾಡಿದೆ. ಇದು ಪ್ರಜಾಪ್ರಭುತ್ವ ವಿರೋಧಿ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img