Hubballi News: ಹುಬ್ಬಳ್ಳಿ: ಮುಖ್ಯಮಂತ್ರಿ ಪಕ್ಕಾ ಹಿಂದೂ ವಿರೋಧಿ. ಕೋರ್ಟ್ ಆಜ್ಞೆಯಂತೆ ನಾವು ದತ್ತ ಪೀಠದಲ್ಲಿ ನಡೆದುಕೊಳ್ಳುತ್ತಿದ್ದೇವೆ. ಇದೀಗ ನೋಟಿಸ್ ಕೊಟ್ಟಿರೋದು ನಾನು ಖಂಡಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಜನವರಿ 22ವರೆಗೂ ಹಿಂದೂ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಪ್ರಹಾರ ಮಾಡ್ತಿದೆ. ಹಳೇ ಕೇಸ ಹೊಸ ಕೇಸ್ ಇರಬಹುದು. ಕಾಂಗ್ರೆಸ್ ಸರ್ಕಾರ ತೊಂದರೆ ಕೊಡ್ತಿದೆ. ಮುಖ್ಯಮಂತ್ರಿ ಪಕ್ಕಾ ಹಿಂದೂ ವಿರೋಧಿ. ಕೋರ್ಟ್ ಆಜ್ಞೆಯಂತೆ ನಾವು ದತ್ತ ಪೀಠದಲ್ಲಿ ನಡೆದುಕೊಳ್ತಿದೆ. ಇದೀಗ ನೋಟಿಸ್ ಕೊಟ್ಟಿರೋದನ್ನು ನಾನು ಖಂಡಿಸುತ್ತೇನೆ ಎಂದರು.
ಹಿಂದೂ ವಿರೋಧಿ ಧೋರಣೆ ಅತಿ ಆಯ್ತು.. ಅಕಸ್ಮಾತ್ ಹೀಗೆ ಮಾಡಿದ್ರೆ ರಾಜ್ಯದ್ಯಂತ ಹೋರಾಟ ಮಾಡುತ್ತೇವೆ. ಮುಸ್ಲಿಂ ವೋಟ್ನಿಂದ ನಾವು ಗೆದ್ದಿದ್ದೇವೆ ಎಂದು ನೀವು ಹೋಗಬೇಡಿ. ರಾಜ್ಯದ ಪ್ರಮುಖರು ಸೇರಿ ನಾವು ಹೋರಾಟದ ನಿರ್ಣಯ ಮಾಡ್ತೀವಿ. ಬಿಜೆಪಿ ಅನೇಕ ಕೇಸ್ ವಾಪಸ್ ಪಡೆದುಕೊಂಡಿದೆ. ಇದೀಗ ಕಾಂಗ್ರೆಸ್ ಅದನ್ನು ರೀ ಓಪನ್ ಮಾಡಿದೆ. ಇದು ನೇರವಾಗಿ ದತ್ತ ಪೀಠ, ಹಿಂದೂಗಳನ್ನ ಟಾರ್ಗೆಟ್ ಮಾಡಿದೆ. ರಾಜ್ಯದಲ್ಲಿ ಟಿಪ್ಪು ಆಡಳಿತ ತುಘಲಕ್ ಅಡಳಿತ ಇದೆ. ಕೇವಲ ಮುಸ್ಲಿಮ್ರಿಗಾಗಿ ಸರ್ಕಾರ ಇದೆ ಅನ್ನೋ ತರಹ ಇದೆ. ಇದು ಕಾಂಗ್ರೆಸ್ ಮಾನಸಿಕತೆ ಸರಿ ಅಲ್ಲ ಎಂದರು.
ಇದಕ್ಕೂ ಮುನ್ಮ ಹುಬ್ಬಳ್ಳಿ ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿರುಬ ಉಪ ಕಾರಾಗೃಹಕ್ಕೆ ಭೇಟಿ ನೀಡಿ ಶ್ರೀಕಾಂತ್ ಆರೋಗ್ಯ ವಿಚಾರಿಸಿದರು.
ಬೇಲ್ಗೆ ವಕೀಲರು ವ್ಯವಸ್ಥೆ ಮಾಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಪುತ್ರ ಮಂಜುನಾಥ ಮತ್ತು ಶ್ರೀರಾಮ ಸೇನೆ ಮುಖಂಡರ ಉಪಸ್ಥಿತರಿದ್ದರು.
ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡಬಾರದೆಂದು ಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ ಪಿಎಸ್ಐ
ಕರಸೇವಕ ಶ್ರೀಕಾಂತ ಜಾಮೀನು ಅರ್ಜಿ ವಿಚಾರಣೆ – ತೀರ್ಪು ಕಾಯ್ದಿರಿಸಿದ ಕೋರ್ಟ್