Friday, June 20, 2025

Latest Posts

ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಅಟೆಂಡರ್ ಬಂಧನ

- Advertisement -

Hassan News: ಹಾಸನ : ಎಸ್‌ಬಿಐ ಬ್ಯಾಂಕ್‌ನಲ್ಲಿ ಗ್ರಾಹಕರು ಗಿರಿವಿ ಇಟ್ಟಿದ್ದ 1.7 ಕೆಜಿಯಷ್ಟು ಅಸಲಿ ಚಿನ್ನ ಲಪಟಾಯಿಸಿ, ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ ಬ್ಯಾಂಕ್ ಅಟೆಂಡರ್‌ನನ್ನು ಬಂಧಿಸಲಾಗಿದೆ.

ಪ್ರಕರಣದ ಸಂಬAಧ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಕಲಗೂಡು ತಾಲ್ಲೂಕಿನ ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಕಳೆದ 10 ವರ್ಷದಿಂದ ಹೊರ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಟೆಂಡರ್ ಲವ ಎಂಬಾತ ಬ್ಯಾಂಕ್ ಸಿಬ್ಬಂದಿಯನ್ನು ವಂಚಿಸಿ ಗ್ರಾಹಕರು ಗಿರವಿ ಇಟ್ಟಿದ್ದ ಅಸಲಿ ಚಿನ್ನವನ್ನು ಕದ್ದು, ಆ ಚಿನ್ನದ ಬದಲಿಗೆ ನಕಲಿ ಚಿನ್ನವಿಟ್ಟು, ಒಂದು ಕೋಟಿರೂ. ಮೌಲ್ಯದ ಸುಮಾರು 1.7 ಕೆಜಿಯಷ್ಟು ಚಿನ್ನವನ್ನ ಕದ್ದು ಪದಾರಿಯಾಗಿದ್ದ.

ಈ ಬಗ್ಗೆ ಮೇ.5 ರಂದು ಬ್ಯಾಂಕಿನ ಗಿರವಿ ವಿಭಾಗದವರು ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ. ಸ್ಥಳೀಯ ಅಧಿಕಾರಿ ನೀಡಿದ ದೂರು ಆಧರಿಸಿ, ನಗರದ ಎನ್.ಆರ್.ಸರ್ಕಲ್‌ನಲ್ಲಿರುವ ಎಸ್‌ಬಿಐನ ರೀಜಿನಲ್ ಬ್ಯುಸಿನೆಸ್ ಆಫೀಸ್‌ನ ಸಹಾಯಕ ಜನರಲ್ ಮ್ಯಾನೇಜರ್ ಟಿ.ಅನುರಾಧಾ ಎಂಬುವರು ಜೂ.14 ರಂದು ಕೊಣನೂರು ಪೊಲೀಸ್ ಠಾಣೆಗೆ ನೀಡಿದರು. ಪ್ರಕರಣ ದಾಖಲಿಸಿ ತನಿಖೆ ಆರಭಿಸಿದ ಪೊಲೀಸರಿಗೆ ಬ್ಯಾಂಕಿನಲ್ಲಿ ಚಿನ್ನ ಗಿರವಿ ಇಟ್ಟಿದ್ದ ಗ್ರಾಹಕರ ಚಿನ್ನವನ್ನು ವಂಚಕ ಎಲ್ಲಾ ಆಟಗಳು ಬಯಲಾಗಿದೆ. ಆರೋಪಿ ಕಪಾಟಿನಲ್ಲಿದ್ದ 30 ಪಾಕೆಟ್ ಚಿನ್ನದಲ್ಲಿ 18 ಪಾಕೆಟ್ ಚಿನ್ನ ಕದ್ದು ಅದರಲ್ಲಿ ನಕಲಿ ಚಿನ್ನ ಇಟ್ಟಿದ್ದಾನೆ ಎಂಬುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ. ಎರಡು ಪಾಕೆಟ್ ಚಿನ್ನವನ್ನು ಸಂಪೂರ್ಣ ಎಗರಿಸಿ ಇತರೆ ಹತ್ತು ಪಾಕೆಟ್‌ಗಳಲ್ಲಿ ಅಲ್ಪ ಪ್ರಮಾಣದ ಚಿನ್ನಕ್ಕೆ ಕನ್ನ ಹಾಕಿದ್ದ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು  ಬಂಧಿಸಿ, ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ವಿವರಿಸಿದರು.

2013 ರಿಂದ ಬ್ಯಾಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲವ, ಇತ್ತೀಚೆಗೆ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ವಿಶ್ವಾಸಗಳಿಸಿ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಇದೇ ಅವಕಾಶವನ್ನು ದುರುಪಯೋಗ ಪಡಿಸಿಕೊಂಡ ಆರೋಪಿ ಲವಾ, ಮೊದಲು ಗಿರವಿ ಇಟ್ಟಿದ್ದ ಚಿನ್ನವನ್ನು ಕದ್ದು ಬೇರೊಂದು ಫೈನಾನ್ಸ್ನಲ್ಲಿ ಗಿರವಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದ. ಕೊನೆಗೆ ಬ್ಯಾಂಕ್‌ನಲ್ಲಿದ್ದ 1.7 ಕೆ.ಜಿ ಚಿನ್ನವನ್ನು ದೋಚಿಕೊಂಡು, ಅಸಲಿ ಚಿನ್ನದ ಬದಲಿಗೆ ನಕಲಿ ಚಿನ್ನವಿಟ್ಟು ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಶಾಕ್: ಧಾರವಾಡಕ್ಕೆ ಎಂಟ್ರಿ ಕೊಡಲು ಅನುಮತಿ ನಿರಾಕರಿಸಿದ ಕೋರ್ಟ್

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದು ಕೋಲಾರದಲ್ಲಿ ಕಾಂಗ್ರೆಸ್ಸಿಗರಿಂದ ಪ್ರತಿಭಟನೆ..

ಜಗದೀಶ್ ಶೆಟ್ಟರ್‌ಗೆ ಮತ್ತೊಮ್ಮೆ ಮುಖಭಂಗ: ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

- Advertisement -

Latest Posts

Don't Miss