Wednesday, October 15, 2025

Latest Posts

Doddaballapura : ದುಷ್ಕರ್ಮಿಗಳಿಂದ ಮನೆಯ ಗೋಡಾನ್ ಗೆ ಬೆಂಕಿ

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭುವನೇಶ್ವರಿ ನಗರದ 5 ವಾರ್ಡಿನ ಸಿದ್ದಲಿಂಗಪ್ಪ ಎಂಬುವರರ ಮನೆಯ ಗೋಡಾನ್ ಗೆ  ರಾತ್ರಿ 1 ಗಂಟೆಯ ಸಮಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಸಿದ್ದಲಿಂಗಪ್ಪ ಇವರ ಮನೆಯಲ್ಲಿ ಇದ್ದ ಬಾಡಿಗೆದಾರರ   ಒಂದು ಸೈಕಲ್ ಹಾಗೂ 3 ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿದ್ದು ಪರಿಣಾಮ ಒಂದು ಸ್ಕೂಟಿ ಹಾಗೂ ಸೈಕಲ್ ಸಂಪೂರ್ಣ ಸುಟ್ಟು ಕರಕಲಾಗಿದೆ‌.

ಅಷ್ಟೆ ಅಲ್ಲದೆ ಮನೆಯ ಮೇಲ್ಚಾವಣಿಯಲ್ಲಿ ಬೆಂಕಿಯ ಹೊಗೆ ಆವರಿಸಿದ್ದು ಬಾಡಿಗೆ ಮನೆಯವರಿಗೆ ಗಾಬರಿ ಉಂಟುಮಾಡಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss