Political News: ಸೇವೆ, ಸುಶಾಸನ , ಬಡವರ ಕಲ್ಯಾಣದ 11 ವರ್ಷಗಳ ಸೇವೆ, ಸಾಧನೆಯ ಕುರಿತು ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗೂ ನವೀಕರಿಸಬಹುದಾದ ಇಂಧನ ಖಾತೆಗಳ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಮಾತನಾಡಿದರು.
ಭಾರತ ‘Policy paralysis to a decisive and transparent government’ ಆದ ಬಗ್ಗೆ ಹಾಗೂ ಬಿಜೆಪಿ ಸರ್ಕಾರ ಕಳೆದ 11 ವರ್ಷಗಳ ಸಾಧನೆ, ಹಲವು ಮೊದಲುಗಳು, ವಿಶ್ವನಾಯಕನ ಪಟ್ಟಕ್ಕೆರಿದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
– ಮೋದಿ 3.0 ಸರ್ಕಾರ ಒಂದು ವರ್ಷ ಪೂರೈಸಿ, ಇದೀಗ 11 ವರ್ಷ ಪೂರೈಸಿದೆ
– 2014 ರಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಸುಸ್ಥಿರ ಆಡಳಿತದ ಸರ್ಕಾರ ನಡೆಯುತ್ತಿದೆ.
– ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಸುಸ್ಥಿರತೆ ಇಲ್ಲದೆ ಅಸಮರ್ಥವಾಗಿತ್ತು.ಪಾಲಿಸಿ ಪ್ಯಾರಾಲಿಸಿಸ್ ಇತ್ತು
– ಇಂದು ಭಾರತ ಆರ್ಥಿಕ ಪ್ರಗತಿಯಲ್ಲಿ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ.
– ಈ ಹಿಂದೆ 1 ಟ್ರಿಲಿಯನ್ ಆರ್ಥಿಕತೆ ಸಾಧಿಸಲು 30-40 ವರ್ಷ ಬೇಕಾಯ್ತು.
– ಬರೊಬ್ಬರಿ 65 ವರ್ಷ 2 ಟ್ರಿಲಿಯನ್ ಆರ್ಥಿಕತೆ ಸಾಧಿಸಲು ಸಮಯ ಬೇಕಾಯ್ತು.
– ಪ್ರಧಾನಿ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ ನಂತರ 2 ರಿಂದ 4 ಟ್ರಿಲಿಯನ್ ಆರ್ಥಿಕತೆಯ ದೇಶ ಆಗಿದೆ
– ದೇಶದ ರಕ್ಷಣೆಯ ವಿಚಾರದಲ್ಲಿ ಈ ಹಿಂದೆ ಸಮರ್ಥ ನಿರ್ಧಾರ ಕೈಗೊಳ್ಳಲಾಗದ ಸರ್ಕಾರ ಇತ್ತು
– ಗಡಿ ಭಾಗದಲ್ಲಿ ಅಭಿವೃದ್ದಿ ಹಾಗೂ ಸಿಡಿಎಸ್ಗೆ ನೇಮಕ ಮಾಡಲಾಗಿರಲಿಲ್ಲ , ಇಂದು ಸಾಕಾರಗೊಂಡಿದೆ.
– ಇದೆಲ್ಲದರ ಪರಿಣಾಮವೇ ಯಶಸ್ವಿ ಆಪರೇಷನ್ ಸಿಂಧೂರ್
– ಪಶುಪತಿಯಿಂದ ತಿರುಪತಿವರೆಗೆ ರೆಡ್ ಕಾರಿಡಾರ್ ಮಾಡಿಯೇ ತೀರುತ್ತೇವೆ ಎಂದು ನಕ್ಸಲರು ಮುಂದಾಗಿದ್ದರು.
– 2026 ರಷ್ಟರಲ್ಲಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ಕಣ್ಮರೆಯಾಗಲಿದೆ
– ನಮ್ಮ ಸರ್ಕಾರ ನಕ್ಸಲ್ ಚಟುವಟಿಕೆ ಯ ಬೆನ್ನು ಮೂಳೆ ಮುರಿದು ಹಾಕಿದೆ
– ಡಿಫೆನ್ಸ್ ರಪ್ತು ಪ್ರಮಾಣ 25 ಸಾವಿರ ಕೋಟಿಯಷ್ಟು ಹೆಚ್ಚಾಗಿದೆ
– ಭಾರತೀಯರಿಗೆ ಜಗತ್ತಿನ ಯಾವುದೇ ಪ್ರದೇಶದಲ್ಲಿ ತೊಂದರೆ ಆದರೂ ಅವರು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ಸು ಕರೆದುಕೊಂಡು ಬಂದಿದ್ದೇವೆ
– ಆಫ್ಘಾನಿಸ್ತಾನ, ರಷ್ಯಾ-ಯುಕ್ರೆನ್ ಯುದ್ದದ ಸಂದರ್ಭ
– ನಮ್ಮ 137 ಕೋಟಿ ಜನರಿಗೆ ಕೋವಿಡ್ ವ್ಯಾಕ್ಸಿನ್ ಕೊಟ್ಟು ಬೇರೆ ದೇಶಗಳಿಗೂ ಕಳಿಸಿಕೊಟ್ಟಿದ್ದೇವೆ
– ಡಿಜಿಟಲ್ ನಲ್ಲಿ ಭಾರತ ದಾಖಲೆ ಬರೆದಿದೆ
– 2024 ರಲ್ಲಿ 24 ಲಕ್ಷ ಕೋಟಿ ಯುಪಿಐ ಡಿಜಿಟಲ್ ಟ್ರಾನ್ಸಾಕ್ಷನ್ ಆಗಿದೆ
– ಡಿಬಿಟಿ ಮೂಲಕ 44 ಲಕ್ಷ ಕೋಟಿ ರೂ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಆಗಿದೆ
– 12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಮಾಡಿದ್ದೇವೆ
– 6.93 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ದೇಶದಲ್ಲಿ ಹಾಕಲಾಗಿದೆ
– ಕೇವಲ 9 ರೂಗೆ 1 ಜಿ ಬಿ ಡೇಟಾ ದರ ಕೊಡಲಾಗಿದೆ.
– 87 ಕೋಟಿ ಜನಕ್ಕೆ ಆಹಾರ ಭದ್ರತೆ ಒದಗಿಸಿದ್ದೇವೆ
– 17% ದೇಶದ ಅರಣ್ಯ ಪ್ರಮಾಣ ಹೆಚ್ಚಾಗಿದೆ
– 3682 ಹುಲಿಗಳು ದೇಶದಲ್ಲಿ ಹೆಚ್ಚಾಗಿವೆ
– ಸೌಭಾಗ್ಯ ಯೋಜನೆಯಡಿ ಎಲ್ಲ ಮನೆಗಳಿಗೂ ವಿದ್ಯುತ್
– ಈ ಹಿಂದೆ 240 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಕಳೆದ ಹತ್ತು ವರ್ಷದಲ್ಲಿ 460 ಗಿಗಾ ವ್ಯಾಟ್ ಸೌರ ವಿದ್ಯುತ್ ಹೆಚ್ಚಳವಾಗಿದೆ
– 370 ನೇ ವಿಧಿ ರದ್ದು
– ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ್ ಕಾರಿಡಾರ್, ಮಹಾಕಾಲ್ ಪ್ರಾಜೆಕ್ಟ್ ಮಾಡಲಾಗಿದೆ.
– ಸರಿಯಾದ ನೀತಿಯ ಪರಿಣಾಮ ಒಂದು ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳು ದೇಶದಲ್ಲಿವೆ
– 68 ಲಕ್ಷ ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿಯಡಿ ಸಾಲ
– ದೇಶದ ಕಡುಬಡತನ ಕಡಿಮೆಯಾಗಿದೆ. 26 ಕೋಟಿ ಜನ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ.
– ಇದು ನಮ್ಮ ಅಂಕಿ ಅಂಶ ಅಲ್ಲ, ವಿಶ್ವಬ್ಯಾಂಕ್ ಅಂಕಿ ಅಂಶ
– ದೇಶದ ಕೃಷಿ ವಲಯದಲ್ಲಿ ಸಾಕಷ್ಟು ಸುಧಾರಣೆ ಆಗಿದೆ
– ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಸುಧಾರಣೆಗಳಾಗಿವೆ
– 10% ಆರ್ಥಿಕ ದುರ್ಬಲರಿಗೆ ಮೀಸಲಾತಿ
– 71% ಫಸಲ್ ಬಿಮಾ ಯೋಜನೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಫಲಾನುಭವಿಗಳದ್ದಾರೆ
– 1,75,000 ಲಕ್ಷ ಕೋಟಿ ಹಣವನ್ನು 24 ಕೋಟಿ ರೈತರು ಕ್ಲೈಮ್ ಪಡೆದಿದ್ದಾರೆ.
– 12 ವಾರಗಳಿದ್ದ ಹೆರಿಗೆ ರಜೆ 26 ವಾರಕ್ಕೆ ಏರಿಕೆ ಮಾಡಲಾಗಿದೆ
– ಮೆಡಿಕಲ್ ಸೀಟ್ 1,08,000 ಸಾವಿರಕ್ಕೆ ಏರಿಕೆಯಾಗಿದೆ, ಮುಂದಿನ ವರ್ಷ 75,000 ಸೀಟ್ ಹೆಚ್ಚಳವಾಗಲಿದೆ
– 80,000 ಸಾವಿರ ಪಿಜಿ ಮೆಡಿಕಲ್ ಸೀಟ್ ಹೆಚ್ಚಳವಾಗಲಿದೆ
– 160 ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ
– IT Returns 8 ಕೋಟಿ ಜನ ತುಂಬುತ್ತಿದ್ದಾರೆ
– 9 ಕೋಟಿ ಜನ ಆಯುಷ್ ಮಾನ್ ಭಾರತ್ ನೀಡಲಾಗಿದೆ
– 7 ಲಕ್ಷ ಕೋಟಿ ಡಿಫೆನ್ಸ್ ಬಜೆಟ್ ನೀಡಲಾಗಿದೆ.
– ದೇಶದ ಗಡಿಯಲ್ಲಿ ಬರೊಬ್ಬರಿ 14875 ಕಿಲೋ ಮಾರ್ಗದಲ್ಲಿ ರಸ್ತೆ ನಿರ್ಮಾಣವಾಗಿದೆ
– 8000 ಕೋಟಿ ಹಣ ರಾಜ್ಯಕ್ಕೆ ರೈಲ್ವೆ ಬಜೆಟ್ ನೀಡಲಾಗಿದೆ
– ಶೇ. 570% ರಸ್ತೆ ಗ್ರಾಮೀಣ ಮೂಲಸೌಕರ್ಯದ ಬಜೆಟ್ ಹೆಚ್ಚಿಸಲಾಗಿದೆ.
– ರೈಲ್ವೇ ಎಲೆಕ್ಟ್ರಿಫಿಕೇಷನ್ 43 ಸಾವಿರ ಕಿ.ಮೀ
– 1,03,057 ಲಕ್ಷ ಪೇಟೆಂಟ್ ದಾಖಲಾಗಿವೆ
– ನಿತ್ಯ 34 ಕಿಮೀ ರಸ್ತೆ ನಿರ್ಮಾಣ ಆಗ್ತಿದೆ
– 23 ನಗರಗಳಲ್ಲಿ ಮೆಟ್ರೋ ಸಂಪರ್ಕ ಇದೆ, ಮೊದಲು 5 ನಗರಗಳಲ್ಲಿ ಮಾತ್ರ ಇತ್ತು
– 35 ವರ್ಷಗಳ ಕಾಲ ಒಂದೇ ಒಂದು ಏರ್ಕ್ರಾಫ್ಟ್ ಸೇನೆಗೆ ಸೇರಿರಲಿಲ್ಲ
ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ಕೊಡುವವರು, ದೇಶದ ಜನ ನೋಡಿದ ಬದಲಾವಣೆಗಳು, ಜಗತ್ತು ನಿಬ್ಬೆರಗಾಗಿದ ಅಭಿವೃದ್ಧಿ, ಭಾರತ ಆರ್ಥಿಕತೆಯ ಕೇಂದ್ರವಾಗುತ್ತಿರುವನ್ನು ಸಹಿಸದೆ, ಏನು ತಿಳಿಯದೆ ಮಾತನಾಡುತ್ತಿದ್ದಾರೆ. ಜನ ಮೋದಿಯವರನ್ನು ಹೀರೋ ಮಾಡಿ, ಕಾಂಗ್ರೆಸ್ಸನ್ನು ಜೀರೊ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದ್ದಾರೆ.