Saturday, January 18, 2025

Latest Posts

UPPER HOUSE: 4 ಸೀಟು.. MLC ಫೈಟು.. ಕಾಂಗ್ರೆಸ್ ನಲ್ಲಿ ಅದೃಷ್ಟ ಯಾರಿಗೆ..?

- Advertisement -

ವಿಧಾನ ಪರಿಷತ್ತಿನ 4 ನಾಮನಿರ್ದೇ ಶನ ಸ್ಥಾನಗಳಿಗೆ ಕಾಂಗ್ರೆಸ್‌ ನಲ್ಲಿ ದಿನೇ ದಿನೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಅಲ್ಲದೇ ಈ ಅವಕಾಶಕ್ಕಾಗಿ ಆಕಾಂಕ್ಷಿಗಳು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಿದೆ.

ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್ ಅವರ ನಿವೃತ್ತಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ನಾನದ ಜತೆಗೆ ಜ.27ರಂದು ಜೆಡಿಎಸ್‌ನ ತಿಪ್ಪೇಸ್ವಾಮಿ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನ ಸೇರಿ 4 ಸ್ಥಾನಗಳಿಗೆ ನಾಮನಿ ರ್ದೇಶನ ಮಾಡಲು ಸರ್ಕಾರಕ್ಕೆ ಅವಕಾಶವಿದೆ.

 

ಈ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ ನಲ್ಲಿ 4 ಸ್ಥಾನಗಳ ಮೇಲೆ ಒಂದೂವರೆ ಡಜನ್‌ ಗೂ ಹೆಚ್ಚು ಮಂದಿ ಕಣ್ಣಿಟ್ಟಿದ್ದಾರೆ. ಮಾಜಿಗಳಾದ ಯು.ಬಿ.ವೆಂಕ ಟೇಶ್, ಪ್ರಕಾಶ್ ರಾಥೋಡ್ ಅವರು ಮತ್ತೊಂದು ಅವಧಿಗೆ ಪ್ರಯತ್ನ ನಡೆಸಿದ್ದಾರೆ. ಬಂಜಾರ ಸಮುದಾ ಯಕ್ಕೆ ಸಚಿವ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ನೀಡಿಲ್ಲ. ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ತಮಗೆ ಅವಕಾಶ ಕೊಡಬೇ ಕೆಂದು ಪ್ರಕಾಶ್ ರಾಥೋಡ್ ಪಕ್ಷದ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಯು.ಬಿ.ವೆಂಕಟೇಶ್ ತಮ್ಮದೇ ಮಾರ್ಗದಲ್ಲಿ ಪ್ರಯತ್ನ ನಡೆಸಿದ್ದಾರೆ. ಜತೆಗೆ ಮೇಲ್ಮನೆಯ ಮಾಜಿ ಸಭಾಪತಿಗಳಾದ ಡಾ.ಬಿ.ಎಲ್. ಶಂಕರ್, ವಿ.ಆ‌ರ್.ಸುದರ್ಶನ, ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಹಲವು ಮಾಜಿ ಸಚಿವರು, ಮಾಜಿ ಶಾಸಕರು ಸೇರಿ ಒಂದೂವರೆ ಡಜನ್ ಗೂ ಹೆಚ್ಚು ಮಂದಿಯ ಹೆಸರು ಚಲಾವಣೆಯಲ್ಲಿವೆ. ಈ ನೇಮಕಾತಿ ಸಂಬಂಧ ಈಗಾಗಲೇ ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದರೂ ಜಾತಿ, ಜಿಲ್ಲೆ, ಪ್ರಾದೇಶಿಕ ಸಮತೋಲನ ಎಲ್ಲ ವನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ 1 ಸುತ್ತಿನ ಮಾತುಕತೆ ನಡೆಸಿದ ಬಳಿಕ ಸಂಭವನೀಯ ಪಟ್ಟಿ ಸಿದ್ಧವಾಗುವ ಸಾಧ್ಯ ತೆಗಳಿವೆ. ಆ ನಂತರ ಇಬ್ಬರೂ ದಿಲ್ಲಿಗೆ ತೆರಳಿ ಪಕ್ಷದ ಹೈಕಮಾಂಡ್ ಜತೆ ಸಮಾಲೋಚನೆ ನಡೆ ಸಿದ ಬಳಿಕವೇ ಪಟ್ಟಿ ಬಿಡುಗಡೆ ಆಗಲಿದೆ.

- Advertisement -

Latest Posts

Don't Miss