ದೇಶದಲ್ಲಿ ಕೋವಿಡ್-19 ಹೆಚ್ಚಾಗುತ್ತಿರುವಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಮಾರ್ಗಸೂಚಿಗಳನ್ನು ತಂದಿದೆ ಮತ್ತು ಕೊರೊನಾ ಮೂರನೇ ಅಲೆ ಹೋರಾಟಕ್ಕೆ ಮುಂಜಾಗೃತ ಕ್ರಮವನ್ನು ವಹಿಸುತ್ತಿದೆ. ಈಗಾಗಿ ಖಾಸಗೀ ಆಸ್ಪತ್ರೆಗಳಿಗೆ 75% ಬೆಡ್ಗಳನ್ನು ಕಾಯ್ದಿರಸಬೇಕೆಂದು ಸಂದೇಶವನ್ನು ಬುಧವಾರ ರವಾನೆಮಾಡಿದೆ.
ಕಳೆದ ಬಾರಿ ಖಾಸಗೀ ಆಸ್ಪತ್ರೆಗಳು ಬೆಡ್ಗಳು ಇದ್ರೂ ಸೋಂಕಿತರಿಗೆ ಕೊಡದೆ ಹೈಡ್ರಾಮವನ್ನು ಮಾಡಿದ್ದವು ಹೀಗಾಗಿ ಈ ಬಾರಿ ಸರ್ಕಾರ ಎಚ್ಚೆತ್ತು. ಕಳೆದ ಬಾರಿ ಆಗದಂತೆ ಖಾಸಗೀ ಆಸ್ಪತ್ರೆಗಳಿಗೆ ಮಾಹಿತಿಯನ್ನು ರವಾನೆಮಾಡಿದೆ.
ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಗಮನಾರ್ಹ ರೀತಿಯಲ್ಲಿ ಏರಿಕೆಯಾಗಿವೆ ಈಗಾಗಿ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದೊಂದು ಯುದ್ಧದ ರೀತಿಯಲ್ಲಿ ಹಾಗಾಗಿ ಯುದ್ಧದ ಸಿದ್ದತೆಯ ಆಧಾರದ ಮೇಲೆ ಮಾಡಲಾಗಿದೆ. ಕೋವಿಡ್- 19 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಒದಗಿಸಲು, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಸೇರಿದಂತೆ
ಖಾಸಗೀ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಸೋಂಕಿನ ತೀವ್ರತೆ ಮಟ್ಟ, ಮತ್ತು ಎಲ್ಲದಕ್ಕೂ ಸಹ ತೀರ್ವ ನಿಗಾ ವಹಿಸಿದೆ.




