National News: ಚಂಢೀಘಡ: ಕಳ್ಳರನ್ನ ಹಿಡಿಯಲು ಪೊಲೀಸರು ತರಹೇವಾರಿ ಐಡಿಯಾಗಳನ್ನ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇಲ್ಲೊಂದು ಕೇಸ್ನಲ್ಲಿ ಪೊಲೀಸರು ಕೋಟಿ ಕೋಟಿ ಕದ್ದ ಕಳ್ಳ ದಂಪತಿಯನ್ನು ಹಿಡಿಯಲು 10 ರೂಪಾಯಿ ಜ್ಯೂಸ್ ಸಹಾಯ ತೆಗೆದುಕೊಂಡಿದ್ದಾರೆ.
ಜಸ್ವಿಂದರ್ ಕೌರ್, ಮಂದೀಪ್ ಕೌರ್ ಎಂಬ ದಂಪತಿ, 8 ಕೋಟಿ 49 ಲಕ್ಷ ಕದ್ದು ಪರಾರಿಯಾಗಲು ಯತ್ನಿಸಿದ್ದರು. ಇವರನ್ನೇ ಪೊಲೀಸರು 10 ರೂಪಾಯಿ ಜ್ಯೂಸ್ ಸಹಾಯದಿಂದ ಅರೆಸ್ಟ್ ಮಾಡಿದ್ದಾರೆ. ಇಷ್ಟು ಹಣ ಕದಿಯಲು ಇವರಿಗೆ ಇನ್ನೂ 10 ಜನ ಸಹಾಯ ಮಾಡಿದ್ದರು. ಒಟ್ಟು 12 ಜನರ ಪೈಕಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಾವಂದುಕೊಂಡ ಕೆಲಸ ನೆರವೇರಿಸಿದ್ದಕ್ಕಾಗಿ ದಂಪತಿ ತೀರ್ಥಯಾತ್ರೆಯ ಪ್ರವಾಸ ಕೈಗೊಂಡಿದ್ದರು. ಈ ವಿಷಯ ತಿಳಿದ ಪೊಲೀಸರು, ಕಳ್ಳರನ್ನು ಹಿಡಿಯಲು ಪ್ಲಾನ್ ಮಾಡಿದ್ದಾರೆ. ಕದ್ದ ದುಡ್ಡನ್ನೆಲ್ಲ ತೆಗೆದುಕೊಂಡು, ದಂಪತಿ ನೇಪಾಳಕ್ಕೆ ಹೋಗಲು ಪ್ಲಾನ್ ಮಾಡಿದ್ದಾರೆ. ಆದರೆ ಅದಕ್ಕೂ ಮುನ್ನ ಹರಿದ್ವಾರ, ಕೇದಾರನಾಥ್, ಹಿಮಕುಂಡ್ ಸಾಹೀಬ್ ಗೆ ಹೋಗಲು ನಿರ್ಧರಿಸಿದ್ದಾರೆ.
ಉತ್ತರಾಖಂಡದ ಸಿಖ್ ದೇವಸ್ಥಾನಕ್ಕೆ ದಂಪತಿ ಹೋದಾಗ, ಅಲ್ಲೇ ಕಾದು ಕುಳಿತಿದ್ದ ಪೊಲೀಸರು, ಬಂದ ಭಕ್ತಾದಿಗಳಿಗೆ ಜ್ಯೂಸ್ ಕೊಡಲು ಮುಂದಾಗಿದ್ದಾರೆ. ಈ ಪ್ಲಾನ್ ಮಾಡಲು ಕಾರಣವೇನೆಂದರೆ, ಕಳ್ಳ ದಂಪತಿ ಮುಖಮುಚ್ಚಿಕೊಂಡು ಓಡಾಡುತ್ತಿದ್ದು, ಜ್ಯೂಸ್ ಕುಡಿಯಲು ಅವರು ಮಾಸ್ಕ್ ತೆಗೆದೇ ತೆಗೆಯುತ್ತಾರೆ. ಬಳಿಕ ಅವರನ್ನು ಅರೆಸ್ಟ್ ಮಾಡಬಹುದು ಎಂಬ ಐಡಿಯಾ ಪೊಲೀಸರದಾಗಿತ್ತು.
ಅದೇ ರೀತಿ ದಂಪತಿ ಜ್ಯೂಸ್ ಕುಡಿಯಲು ಮಾಸ್ಕ್ ತೆಗೆದಿದ್ದು, ಆರೋಪಿಗಳು ಇವರೇ ಅನ್ನೋದು ಪೊಲೀಸರಿಗೆ ಪಕ್ಕಾ ಆಗಿದೆ. ಆದರೆ ತಕ್ಷಣ ಅವರನ್ನು ಬಂಧಿಸದ ಪೊಲೀಸರು, ದೇವರ ದರ್ಶನಕ್ಕೆ ಅವಕಾಶ ಕೊಟ್ಟಿದ್ದಾರೆ. ಬಳಿಕ ಅವರನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಇವರಿಬ್ಬರು ಬಂಧಿತರಾದ ಬಳಿಕ, ಉಳಿದ 7 ಜನರನ್ನು ಬಂಧಿಸಲಾಗಿದೆ. ಈಗ ಇನ್ನೂ 3 ಜನರನ್ನು ಬಂಧಿಸುವುದು ಬಾಕಿ ಇದೆ. ಕದ್ದವರೆಲ್ಲ ದುಡ್ಡನ್ನು ಶೇರ್ ಮಾಡಿಕೊಂಡಿದ್ದು, ಈ ದಂಪತಿಯ ಬಳಿ, 21 ಲಕ್ಷ ರೂಪಾಯಿ ಸಿಕ್ಕಿದೆ.
ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ರನ್ನ ಭೇಟಿಯಾದ ನಿಖಿಲ್ ಕುಮಾರ್.
ವ್ಹೀಲ್ ಚೇರ್ ಇಲ್ಲದ್ದಕ್ಕೆ, ಸ್ಕೂಟಿಯಲ್ಲೇ ಆಸ್ಪತ್ರೆಯ ಲಿಫ್ಟ್ ಏರಿ ಹೋದ ವ್ಯಕ್ತಿ : ವೀಡಿಯೋ ವೈರಲ್
‘ಈ ಹೋರಾಟದ ಮುಂದೆ ನನ್ನ ಕೆಲಸ ಚಿಕ್ಕದು, ಅವಶ್ಯಕತೆ ಇದ್ದರೆ, ಕೆಲಸವನ್ನೂ ಬಿಡುತ್ತೇನೆ’