ಸಿಎಂ‌ ಸಿದ್ಧರಾಮಯ್ಯ ಅವರು ರಾಜಕೀಯ ಬಿಡುವುದಾಗಿ‌ ಎಲ್ಲಿಯೂ ಹೇಳಿಲ್ಲ: ಶಾಸಕ ಕೋನರೆಡ್ಡಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಎನ್.ಎಚ್.ಕೋನರೆಡ್ಡಿ, ಕೆಪಿಸಿಸಿ‌ ಅಧ್ಯಕ್ಷ್ಯ ಸ್ಥಾನ‌ ಹಾಗೂ ಸಿಎಂ‌ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಪಕ್ಷದಲ್ಲಿ ಒಗ್ಗಟ್ಟಿನ‌ ಕುರಿತು ಚರ್ಚೆಗಳಾಗುತ್ತಿವೆ. ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಾಗಲೇ ಎಲ್ಲ‌ಶಾಸಕರುಗಳಿಗೆ ಯಾವ ವಿಚಾರದ ಬಗ್ಗೆಯೂ ಮಾತನಾಡದಂತೆ ಪಕ್ಷದ ಹೈಕಮಾಂಡ್ ಸೂಚನೆ‌ ನೀಡಿದೆ. ಹಾಗಾಗಿ ನಾವು‌ ಪಕ್ಷದ ಆಂತರಿಕ‌ ಬೆಳವಣಿಗೆಗಳ ಬಗ್ಗೆ ಮಾತನಾಡುವುದಿಲ್ಲ. ಸಿಎಂ‌ ಸಿದ್ಧರಾಮಯ್ಯ ಅವರು ರಾಜಕೀಯ ಬಿಡುವುದಾಗಿ‌ ಎಲ್ಲಿಯೂ ಹೇಳಿಲ್ಲ. ಹೀಗಾಗಿ‌ ಬದಲಾವಣೆ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ‌ ಎಲ್ಲ ನಾಯಕರೂ‌ ಮುಖ್ಯ. ಎಲ್ಲ ನಾಯಕರೂ ಪಕ್ಷದಲ್ಲಿ‌ ಮುಂದುವರೆಯುವುದು ಮುಖ್ಯ.

ಡಿಸಿಎಂ‌ ಗೆ‌ ಎರಡೆರೆಡು ಸ್ಥಾನ‌ ಯಾಕೆ ಎಂಬ‌ ಸತೀಶ‌‌ ಜಾರಕಿಹೊಳಿ‌ ಹೇಳಿಕೆ‌ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೋನರೆಡ್ಡಿ, ಅದು‌ ಅವರ ವೈಯಕ್ತಿಕ‌ ಅಭಿಪ್ರಾಯ. ಎರೆಡೆರೆಡು ಸ್ಥಾನಮಾನಗಳ ಬಗ್ಗೆ ಹೈಕಮಾಂಡ್ ನಿರ್ಧರಿಸಿದೆ. ಆ‌ ಬಗ್ಗೆ ಹೈಕಮಾಂಡ್ ಚರ್ಚೆ ಮಾಡುತ್ತೆ. ಆ ಬಗ್ಗೆ ನಮಗೆ‌ ಯಾವುದೇ ವಿಚಾರ ಗೊತ್ತಿಲ್ಲ ಎಂದು ಹೇಳಿದ್ದಾರೆ.

About The Author