Hubli case: ಮೃತ ಬಾಲಕಿಯ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ ಜಗದೀಶ್ ಶೆಟ್ಟರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಬಾಲಕಿ ಮನೆಗೆ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿದರು. ಶೆಟ್ಟರ್ ಎದುರು ಬಾಲಕಿಯ ತಾಯಿ ನಡೆದ ಘಟನೆಯನ್ನು ವಿವರಿಸಿದ್ದು, ನನ್ನ ಮಗಳಿಗೆ ಎಲ್ಲರೂ ಸೇರಿ ನ್ಯಾಯ ದೊರಕಿಸಿ ಕೊಟ್ಟಿರಿ ಎಂದು ಹೇಳಿದರು. ಬಳಿಕ ಕುಟುಂಬದವರಿಗೆ ಬೇಕಾದ ಸಹಾಯ ಮಾಡುವುದುವಾಗಿ ಅಭಯ ನೀಡಿದರು.

ಇನ್ನೊಂದೆಡೆ ಪ್ರಕರಣದ ತನಿಖೆಗೆ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದೆ. SP ವೆಂಕಟೇಶ ಸೇರಿದಂತೆ ಮೂವರು ಅಧಿಕಾರಿಗಳ ನೇತೃತ್ವದ ತಂಡ ಆಗಮಿಸಿದ್ದು, ತಂಡ ಹುಬ್ಬಳ್ಳಿಯ ಶವಾಗಾರದ ಮುಂದೆ, ಡಿಸಿಪಿ ರವೀಶ್ ಅವರಿಂದ ಮಾಹಿತಿ ಪಡೆದುಕೊಂಡಿದೆ.

About The Author