Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ“ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ“ಂಡಿದ್ದ ಶ್ವೇತಾ ಅವರು, ಸಿರಿಯಲ್ನಿಂದ ಆಚೆ ಬಂದಿದ್ದಾರೆ.
ಹಲವು ದಿನಗಳಲ್ಲಿ ಲಕ್ಷ್ಮೀ ಪಾತ್ರಧಾರಿ ಸಿರಿಯಲ್ನಲ್ಲಿ ಕಾಣಿಸಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದ್ದು, ಏಕೆ ಬರುತ್ತಿಲ್ಲವೆಂದು ಕಾರಣ ಕೇಳಿದ್ದಾರೆ. ಹಾಗಾಗಿ ಇದೀಗ ಶ್ವೇತಾ ಅವರೇ, ತಮ್ಮ Instagram ನಲ್ಲಿ ಈ ಬಗ್ಗೆ Post ಮಾಡಿ, ಸಿರಿಯಲ್ನಿಂದ ಆಚೆ ಬಂದಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ಕಾರಣ ಮತ್ತು ತಮ್ಮ ಅಮ್ಮನಿಗೆ ಆರೋಗ್ಯ ಸರಿಯಾಗಿ ಇಲ್ಲದ ಕಾರಣ, ತಾನು ಸಿರಿಯಲ್ನಿಂದ ಆಚೆ ಬಂದಿದ್ದು, ನಾನು ಸೆಟ್ಲ್ಲಿ ಹಲವರನ್ನು ಮಿಸ್ ಮಾಡಿಕ“ಳ್ಳುತ್ತೇನೆ. ಜೀ ಕನ್ನಡಕ್ಕೂ ಕೂಡ ಧನ್ಯವಾದಗಳು. ಕನ್ನಡಿಗರಿಗೆ ಮತ್ತೆ ನನ್ನನ್ನು ಪರಿಚಯ ಮಾಡಿಕ“ಟ್ಟಿದ್ದಕ್ಕಾಗಿ ಎಂದು ಶ್ವೇತಾ ಧನ್ಯವಾದ ತಿಳಿಸಿದ್ದಾರೆ.
ಸದ್ಯ ಚೆನ್ನೈನಲ್ಲಿ ನೆಲೆಸಿರುವ ಶ್ವೇತಾ ಶೂಟಿಂಗ್ ಸಮಯದಲ್ಲಿ ಮಾತ್ರ ಬೆಂಗಳೂರಿಗೆ ಬರುತ್ತಿದ್ದರು. ಮೂಲ ತಮಿಳಿಗರಾದರೂ, ಕನ್ನಡದ ಸಿರಿಯಲ್ನಲ್ಲಿ ನಟಿಸಲು ಮನಸ್ಸು ಮಾಡಿದ್ದರು. ಆದರೆ ಅವರ ತಾಯಿಗೆ ಅನಾರೋಗ್ಯವಾಗಿರುವ ಕಾರಣ ಅವರು ಸಿರಿಯಲ್ನಿಂದ ಹ“ರನಡೆದಿದ್ದಾರೆ ಎಂದು ಅವರೇ ಹೇಳಿದ್ದಾರೆ.
ಚೈತ್ರದ ಪ್ರೇಮಾಂಜಲಿ, ಗೆಜ್ಜೆನಾದ, ಲಕ್ಷ್ಮೀ ಮಹಾಲಕ್ಷ್ಮೀ, ಕರ್ಪೂರದ ಗ“ಂಬೆ ಸೇರಿ ಹಲವು ಸಿನಿಮಾಗಳಲ್ಲಿ ಶ್ವೇತಾ ಅವರು ಬಣ ಹಚ್ಚಿದ್ದಾರೆ. ಇದೀಗ ಕನ್ನಡದ ಸಿರಿಯಲ್ಗೆ ರಿಎಂಟ್ರಿ ನೀಡಿದ್ದ ಚೈತ್ರಾ, ಮತ್ತೆ ಸಿರಿಯಲ್ ನಿಂದ ಆಚೆ ಬಂದಿದ್ದು, ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಈಗ ಲಕ್ಷ್ಮೀ ಪಾತ್ರಧಾರಿಯ ಸ್ಥಾನವನ್ನು ಯಾರು ತುಂಬಲಿದ್ದಾರೆ ಅನ್ನೋದೇ ಕುತೂಹಲಕಾರಿ ವಿಷಯ.