ಕೂದಲು ಗಟ್ಟಿಮುಟ್ಟಾಗಿ, ಸಾಫ್ಟ್ ಮತ್ತು ಶೈನಿಯಾಗಿರಬೇಕು ಅಂದ್ರೆ ಈ ಹೇರ್ ಪ್ಯಾಕ್ ಹಾಕಿ..!

ಇಂದಿನ ಯುವಕ ಯುವತಿಯರ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಈ ಸಮಸ್ಯೆಗೆ ನಾವೊಂದು ಟಿಪ್ಸ್ ಹೇಳಲಿದ್ದೇವೆ. ಆ ಟಿಪ್ಸ್ ಏನಾದ್ರೂ ನೀವು ಫಾಲೋ ಮಾಡಿದ್ರೆ, kೂದಲು ಉದುರುವ ಸಮಸ್ಯೆ, ರಫ್ ಹೇರ್, ಡ್ಯಾಂಡ್ರಫ್ ಸಮಸ್ಯೆಯಿಂದ ಕೂಡ ಮುಕ್ತಿ ಪಡೆಯಬಹುದು. ಹಾಗಾದ್ರೆ ಯಾವುದು ಆ ಟಿಪ್ಸ್ ಅನ್ನೋದನ್ನ ನೋಡೋಣ ಬನ್ನಿ..

Karnataka TV Contact

ಮುಲ್ತಾನಿ ಮಿಟ್ಟಿ. ನಮ್ಮ ತ್ವಚೆಯ ಸೌಂದರ್ಯ ಕಾಪಾಡುವುದರಲ್ಲಿ ಸಹಕಾರಿಯಲ್ಲದೇ, ಕೂದಲ ಆರೋಗ್ಯ ಕಾಪಾಡುವುದರಲ್ಲಿಯೂ ಸಹಕಾರಿಯಾಗಿದೆ. ಮುಲ್ತಾನಿ ಮಿಟ್ಟಿ ಹೇರ್ ಮಾಸ್ಕ್ ಹಾಕಿದ್ರೆ, ನೀವು ಹೇರ್ ಫಾಲ್, ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ಅಲ್ಲದೇ, ನಿಮ್ಮ ಕೂದಲು ಕೂಡ ಸಾಫ್ಟ್ ಮತ್ತು ಶೈನಿಯಾಗಿರುತ್ತದೆ. ಆದ್ರೆ ಮುಲ್ತಾನಿ ಮಿಟ್ಟಿ ಮತ್ತು ಅದರೊಟ್ಟಿಗೆ ಬಳಸುವ ವಸ್ತು ಉತ್ತಮ ಗುಣಮಟ್ಟದ್ದಿರುವಂತೆ ನೋಡಿಕೊಳ್ಳಬೇಕು.

ಮುಲ್ತಾನಿ ಮಿಟ್ಟಿ ಹೇರ್ ಪ್ಯಾಕ್ ಹಾಕಲು ಅದರೊಂದಿಗೆ ಕೆಲ ವಸ್ತುಗಳನ್ನ ಆ್ಯಡ್ ಮಾಡಬೇಕಾಗುತ್ತದೆ. ಅದೇನೆಂದರೆ ಆ್ಯಲೋವೆರಾ ಜೆಲ್. ಮುಲ್ತಾನಿ ಮಿಟ್ಟಿ ಹೇಗೆ ಮುಖಕ್ಕೂ ಕೂದಲಿಗೂ ಲಾಭದಾಯಕವೋ. ಅಂತೆಯೇ ಆ್ಯಲೋವೆರಾ ಜೆಲ್ ಕೂಡ ತ್ವಚೆ ಹಾಗೂ ಕೇಶ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಇವೆರಡನ್ನು ಮಿಕ್ಸ್ ಮಾಡಿ ಹೇರ್ ಪ್ಯಾಕ್ ಹಾಕಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಇನ್ನು ಈ ಹೇರ್ ಪ್ಯಾಕ್ ಹಾಕುವ ಮುನ್ನ ಯಾವುದಾದರೂ ಎಣ್ಣೆಯಿಂದ ನಿಮ್ಮ ಕೂದಲಿಗೆ ಮಸಾಜ್ ಮಾಡಿಕೊಳ್ಳಿ. ನಂತರ ಈ ಪ್ಯಾಕ್ ಹಾಕಿ, ಒಂದು ತಾಸಿನ ಬಳಿಕ ಉಗುರು ಬೆಚ್ಚು ನೀರಿನಿಂದ ಕೂದಲು ವಾಶ್ ಮಾಡಿ. ಈ ಪ್ಯಾಕನ್ನ ನೀವು ತಿಂಗಳಲ್ಲಿ ಎರಡು ಬಾರಿ ಬಳಸಬಹುದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author