Spiritual: ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪುರಿ ಜಗನ್ನಾಥ ಮಂದಿರ ಪ್ರಸಿದ್ಧ ಮತ್ತು ಪುರಾತನ ಮಂದಿರವಾಗಿದೆ. ನಾವು ಆಗಾಗ ಇಲ್ಲಿ ನಡೆಯುವ ಪವಾಡಗಳ ಬಗ್ಗೆ ಕೇಳುತ್ತಿರುತ್ತೇವೆ. ಅದೇ ರೀತಿ ನಾವಿಂದು ಪುರಿ ಜಗನ್ನಾಥ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಅನ್ನ ತಯಾರಾಗುತ್ತದೆ ಅನ್ನೋ ಪವಾಡದ ಬಗ್ಗೆ ತಿಳಿಯೋಣ.
ಸಾಮಾನ್ಯವಾಗಿ ನಾವು ಒಲೆ ಉರಿಸಿ, ಅದರ ಮೇಲೆ ಪಾತ್ರೆ ಇರಿಸಿ, ಅನ್ನ ಮಾಡಲು ಪ್ರಾರಂಭಿಸಿದರೆ, ಆ ಅನ್ನ ತಯಾರಾಗುತ್ತದೆ. ಅದೇ ಪಾತ್ರೆ ಮೇಲೆ ಪಾತ್ರೆ ಇರಿಸಿ, ನಾವು ಅನ್ನ ತಯಾರಿಸಿದರೆ, ಮುಂಚೆ ಇರಿಸಿದ ಪಾತ್ರೆಯಲ್ಲಿರುವ ಅನ್ನ ಹೆಚ್ಚು ಬೆಂದು, ಅನ್ನ ಮೆತ್ತಗಾಗುತ್ತದೆ. ಆದರೆ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಹಾಗಲ್ಲ, ಇಲ್ಲಿ ಅನ್ನ ಪ್ರಸಾದ ಮಾಡುವ ರೀತಿಯೇ ಆಶ್ಚರ್ಯಕರವಾಗಿದೆ.
ಏಕೆಂದರೆ, ಇಲ್ಲಿ 1ರ ಮೇಲೆ 1 ಮಡಿಕೆ ಇರಿಸಿ, ಅದರಲ್ಲಿ ನೀರು, ಅಕ್ಕಿ ಹಾಕಿ, 1 ಒಲೆಯ ಮೇಲೆ ಬೇಯಲು ಇಡುತ್ತಾರೆ. ಸಾಮಾನ್ಯವಾಗಿ ಒಲೆಗೆ ತಾಕಿ ಇದ್ದ ಪಾತ್ರೆಯಲ್ಲಿರುವ ಅನ್ನ ಮುಂಚೆ ಬೇಯಬೇಕು. ಆದರೆ ಇಲ್ಲಿ ಹಾಗಲ್ಲ. ಮೇಲೆ ಇರಿಸಿರುವ ಪಾತ್ರೆಯಲ್ಲಿ ಅನ್ನ ಮುಂಚೆ ಬೇಯುತ್ತದೆ. ನಂತರ ಅದರ ಕೆಳಗಿರುವ ಎರಡನೇಯ ಪಾತ್ರೆಯಲ್ಲಿರುವ ಅನ್ನ ಬೇಗ ಬೇಯುತ್ತದೆ. ಬಳಿಕ ಅದರ ಕೆಳಗಿನ ಪಾತ್ರೆಯಲ್ಲಿರುವ ಅನ್ನ ಬೇಯುತ್ತದೆ. ಇದೇ ರೀತಿ, ಒಂದ“ಂದೇ ಪಾತ್ರೆಯಲ್ಲಿರುವ ಅನ್ನ ಬೆಂದು, ಬಳಿಕ ಒಲೆಗೆ ತಾಕಿ ಇರಿಸಿದ ಪಾತ್ರೆಯಲ್ಲಿರುವ ಅನ್ನ ಬೇಯುತ್ತದೆ. ಇದು ಪವಾಡವಲ್ಲದೇ ಮತ್ತೇನು..?
ಇಲ್ಲಿನ ಇನ್ನ“ಂದು ವಿಶೇಷತೆ ಅಂದ್ರೆ, ಇಲ್ಲಿ ಅನ್ನವನ್ನು ಸ್ವತಃ ಮಹಾಲಕ್ಷ್ಮೀಯೇ ಬಂದು ತಯಾರಿಸುತ್ತಾಳೆ ಅಂತಾ ಹೇಳಲಾಗುತ್ತದೆ. ಈ ಪವಾಡ ಮಾತ್ರವಲ್ಲದೇ, ಅಲ್ಲಿ ಎಷ್ಟು ಜನ ಭಕ್ತರು ಅನ್ನ ಪ್ರಸಾದ ಸ್ವೀಕರಿಸಲು ಬರುತ್ತಾರೋ, ಅಷ್ಟೇ ಜನಕ್ಕೆ ಮಾತ್ರ ಅನ್ನ ಪ್ರಸಾದ ತಯಾರಾಗಿರುತ್ತದೆ.
ಅಂದ್ರೆ ಅಲ್ಲಿ ಬೆಳಿಗ್ಗೆ ಅಂದಾಜಿನ ಪ್ರಕಾರ ಅನ್ನ ತಯಾರಿಸುತ್ತಾರೆ. ಇಂತಿಷ್ಟು ಸಾವಿರ ಮಂದಿಗೆ ಅನ್ನ ಪ್ರಸಾದ ಮಾಡಿರುತ್ತಾರೆ. ಆಶ್ಚರ್ಯ ಅಂದ್ರೆ, ಅಷ್ಟೇ ಜನ ಬಂದು ಅನ್ನ ಪ್ರಸಾದ ಸ್ವೀಕಾರ ಮಾಡುತ್ತಾರೆ. ಅಂದ್ರೆ ಅಲ್ಲಿ ಅನ್ನ ಸುಮ್ಮನೆ ಹಾಳಾಗುವುದಿಲ್ಲ. ಮಾಡಿದ್ದೆಲ್ಲವೂ ಖಾಲಿಯಾಗುತ್ತದೆ. ಅದೇ ರೀತಿ ಬಂದ ಭಕ್ತರ್ಯಾರು ಹಸಿವಿನಿಂದ ಮನೆಗೆ ಹೋದ ಪ್ರಸಂಗವೇ ಇಲ್ಲ. ಜೈ ಜಗನ್ನಾಥ್.




