Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ನಾವು ಏನೆಂದು ನಾವು ತಿಳಿದಾಗ, ನಮ್ಮ ತಪ್ಪನ್ನು ನಾವು ಸರಿ ಮಾಡಿದಾಗ ಮಾತ್ರ, ನಾವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದಿದ್ದಾರೆ.
ಸುಭಾಷ್ ಚಂದ್ರ ಅವರು 7 ವರ್ಷದವರಿದ್ದಾಗ, ಅವರ ತಾಯಿ ತೀರಿಕ`ಂಡರಂತೆ. ಆದರೆ ಅವರು ಬದುಕಿದ್ದಾಗ 1 ಮಾತು ಹೇಳಿದ್ದರಂತೆ. ಮನುಷ್ಯನಿಗೆ ಮನಸ್ಸು ಮತ್ತು ಆತ್ಮ ಎರಡಿರುತ್ತದೆ. ನಮಗೆ ಯಾವುದು ಹಿತ ನೀಡುತ್ತದೆಯೋ, ಅದು ಮಾಡು ಎಂದು ಮನಸ್ಸು ಹೇಳುತ್ತದೆ. ಆತ್ಮ ಯಾವುದು ನಮ್ಮ ಜೀವನಕ್ಕೆ ಉತ್ತಮವಲ್ಲವೋ, ಅದನ್ನು ಮಾಡಬೇಕು ಎಂದು ಹೇಳುತ್ತದೆ.
ಹಾಗಾಗಿ ನಾವು ಮನಸ್ಸಿನ ಗುಲಾಮರಾಗುವ ಬದಲು, ಆತ್ಮದ ಮಾತು ಕೇಳಬೇಕು ಎಂದು ಸುಭಾಷ್ ಚಂದ್ರ ಅವರ ತಾಯಿ ಹೇಳಿದ್ದರಂತೆ. ಹಾಗಾಗಿ ತಾಯಿಯ ಮಾತನ್ನು ಕೇಳಿ, ಅದನ್ನೇ ಅನುಸರಿಸಿದ ಮಗ ಇಂದು ಸಂಗೀತಾ ಕಂಪನಿಯನ್ನು ಈ ಮಟ್ಟಿಗೆ ತಂದಿದ್ದಾನೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




