Friday, June 20, 2025

Latest Posts

ಮಿಸ್ ಯೂ ಚಿರು ಮಗನೇ :ಚಿರುನನ್ನು ನೆನೆದು ಭಾವುಕರಾದ ಅರ್ಜುನ್ ಸರ್ಜಾ

- Advertisement -

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ನಿಧನರಾದಾಗ ಅರ್ಜುನ್ ಸರ್ಜಾ ಶೂಟಿಂಗ್ ಸ್ಥಗಿತಗೊಳಿಸಿ, ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಮಗನಂತಿದ್ದ ಚಿರು ನಿಧನಕ್ಕೆ ಸಂತಾಪ ಹೊರಹಾಕಿದ್ದರು. ಇದೀಗ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರುವನ್ನು ನೆನೆದು ಭಾವುಕರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರು ಮಗನೇ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರೆ, ಅದನ್ನು ಹೇಳಲಿಕ್ಕಾಗುವುದಿಲ್ಲ. ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಚಿರು ಅಭಿಮಾನಿಗಳು ಕಮೆಂಟ್ ಮಾಡಿದ್ದು, ನಾವೂ ಸಹ ಚಿರುವನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಚಿರು ನಿಧನದ ಬಳಿಕ ಮೇಘನಾ ಸರ್ಜಾ ಅಕ್ಟೋಬರ್ 22ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಸಂತಸ ಹಂಚಿಕೊಂಡಿದ್ದ ಅರ್ಜುನ್ ಸರ್ಜಾ, ಚಿರುವನ್ನ ನಾನೇ ಸ್ಯಾಂಡಲ್‌ವುಡ್‌ನಲ್ಲಿ ಲಾಂಚ್ ಮಾಡಿದ್ದೆ. ಇನ್ನು 20 ವರ್ಷದ ಬಳಿಕ, ಚಿರು ಮಗನನ್ನೂ ನಾನೇ ಲಾಂಚ್ ಮಾಡ್ತೀನಿ ಅನ್ನಿಸುತ್ತೆ ಎಂದು ಹೇಳಿದ್ದರು.

- Advertisement -

Latest Posts

Don't Miss