Thursday, June 19, 2025

Latest Posts

ಹೊಂಬಾಳೆ ತಂಡದಿಂದ ಮತ್ತೊಂದು ಬಿಗ್ ಅನೌನ್ಸ್ ಮೆಂಟ್..! ಈ ಬಾರಿ ಯಾವ ಸ್ಟಾರ್ ಗೆ ನಿರ್ಮಾಣ ಮಾಡ್ತಾರೆ ಕೆಜಿಎಫ್ ನಿರ್ಮಾಪಕ…?

- Advertisement -

ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸಕ್ಸಸ್ ಕಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮಂಸ್ ನಿರ್ಮಾಣ ಸಂಸ್ಥೆ ಮತ್ತೊಂದು‌ ಮೆಗಾ ಅನೌನ್ಸ್ ಮೆಂಟ್ ಗೆ ರೆಡಿಯಾಗಿದೆ.

ಡಿಸೆಂಬರ್ 17ಕ್ಕೆ ಫ್ಯಾನ್ಸ್ ಗೆ ಸಿಕ್ತಿದೆ ಭರ್ಜರಿ ಟ್ರೀಟ್..

ಹೊಂಬಾಳೆ ಫಿಲ್ಮಂಸ್ ಇದೇ ತಿಂಗಳ 17ರಂದು ಬೆಳಗ್ಗೆ 11 ಗಂಟೆ 59 ನಿಮಿಷಕ್ಕೆ ಹೊಸ ಚಿತ್ರವನ್ನು ಅನೌನ್ಸ್‌ ಮಾಡಲು ರೆಡಿಯಾಗಿದೆ. ಅದು ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡಲು ರೆಡಿಯಾಗಿರೋ‌ 8ನೇ ಸಿನಿಮಾವಾಗಿದೆ.

ಇತ್ತೀಚೆಗಷ್ಟೇ ಅಂದ್ರೆ ನವೆಂಬರ್ 30ನೇ ತಾರೀಖಿನಂದು‌ ಹೊಸ ಸಿನಿಮಾ ಘೋಷಿಸಿದ್ದ ಹೊಂಬಾಳೆ ಸಂಸ್ಥೆ ಇದೀಗ ಮತ್ತೊಂದು‌ ಸಿನಿಮಾ ನಿರ್ಮಾಣ‌ ಮಾಡಲು ಸಜ್ಜಾಗಿದೆ. ಪ್ರಭಾಸ್ ಜೊತೆ ಸಲಾರ್ ಸಿನಿಮಾ, ಯಶ್ ಜೊತೆ ಕೆಜಿಎಫ್-2 ಸಿನಿಮಾ, ಅಪ್ಪು ಜೊತೆ ಯುವರತ್ನ ಸಿನಿಮಾ ನಿರ್ಮಾಣ ಮಾಡ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು‌, ಇದೀಗ ಯಾವ ಸ್ಟಾರ್ ಜೊತೆ ಕೈ ಜೋಡಿಸಿದ್ದಾರೆ ಅನ್ನೋ‌ದು ಸದ್ಯಕ್ಕಿರುವ ಸಸ್ಪೆನ್ಸ್.

ಹಾಗ್ ನೋಡಿದ್ರೆ ಹೊಂಬಾಳೆ ಫಿಲ್ಮಂಸ್ ನಿನ್ನಿಂದಲೇ, ಮಾಸ್ಟರ್‌ಪೀಸ್‌, ರಾಜಕುಮಾರ, ಯುವರತ್ನ, ಕೆಜಿಎಫ್‌: ಚಾಪ್ಟರ್‌ 1 ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಈ ಸಂಸ್ಥೆಗಿದೆ. ಪ್ರತಿಯೊಂದು ಸಿನಿಮಾದಲ್ಲಿಯೂ ಮೇಕಿಂಗ್‌ ಕ್ವಾಲಿಟಿ, ಕ್ಯಾಮರಾ ವರ್ಕ್, ಗ್ರಾಫಿಕ್ ವಿಚಾರಗಳಲ್ಲಿ ಒಂದು ಹೆಜ್ಜೆ ಮುಂದಿಡುತ್ತಿರುವ ‘ಹೊಂಬಾಳೆ ಫಿಲ್ಸ್ಮ್‌’ನ ಮುಂದಿನ ಚಿತ್ರ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಸಿನಿರಸಿಕರಲ್ಲಿ ಮನೆ ಮಾಡಿದೆ.

- Advertisement -

Latest Posts

Don't Miss