ಹಲವು ಧರ್ಮಗಳಲ್ಲಿ ಹಲವು ರೀತಿಯ ಆಚರಣೆಗಳಿವೆ. ಆ ಧಾರ್ಮಿಕ ಆಚರಣೆಗಳಲ್ಲಿ ಅಂತ್ಯಸಂಸ್ಕಾರದ ಆಚರಣೆಯೂ ಒಂದು. ಕೆಲವರಲ್ಲಿ ಶವವನ್ನ ಸುಟ್ಟರೆ, ಇನ್ನೂ ಕೆಲವರಲ್ಲಿ ಶವವನ್ನ ಹೂಳಲಾಗುತ್ತದೆ. ಅಂತೆಯೇ ಹಿಂದೂಗಳಲ್ಲಿ ಶವವನ್ನ ಕೊಂಡೊಯ್ಯಬೇಕಾದರೆ, ಅದಕ್ಕೆ ಹಲವು ವಸ್ತುಗಳನ್ನ ಎಸೆಯಲಾಗತ್ತೆ. ಅದನ್ನೆಲ್ಲ ಎಸೆಯುವುದು ಯಾಕೆ..? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವರು ಶವ ಒಯ್ಯುವಾಗ, ಕಮಲದ ಬೀಜ, ಅಂದ್ರೆ ಮಖಾನಾ, ನಾಣ್ಯ ಮತ್ತು ಹೂವನ್ನು ಎಸೆಯುತ್ತಾರೆ. ಇನ್ನು ಸಾಮಾನ್ಯವಾಗಿ ಶವ ಹೋಗುವಾಗ, ನಮಸ್ಕಾರ ಮಾಡಲಾಗುತ್ತದೆ. ಕಮಲದ ಬೀಜ ಆಕಾರದಲ್ಲಿ ದೊಡ್ಡದಾಗಿರುತ್ತದೆ. ಆದ್ರೆ ಅದನ್ನ ಮುಟ್ಟಿದಾಗ, ಅದರಲ್ಲಿ ಯಾವ ಶಕ್ತಿಯೂ ಇರುವುದಿಲ್ಲ. ಅಷ್ಟು ಹಗುರವಾಗಿರುತ್ತದೆ. ಹಾಗೆಯೇ ಮನುಷ್ಯ ಕೂಡ. ಅವನಲ್ಲಿ ಅಂಥ ಉತ್ತಮ ಗುಣವೇನೂ ಇಲ್ಲದಿದ್ದರೂ, ಅಹಂಕಾರ ಮಾತ್ರ ಹೆಚ್ಚಾಗಿರುತ್ತದೆ. ಆ ಅಹಂಕಾರದ ನಾಶವಾಗಲೆಂದೇ ಕಮಲದ ಬೀಜವನ್ನು ಶವಕ್ಕೆ ಹಾಕಲಾಗತ್ತೆ. ರಾಮಾಯಣದಲ್ಲಿ ರಾವಣನ ಅಹಂಕಾರ ಮುರಿಯಲು, ಅವನ ಮೃತ್ಯುವಾದಾಗ, ಇದನ್ನ ಎಸೆಯಲಾಗಿತ್ತು.
ಇನ್ನು ಎರಡನೇಯದು ನಾಣ್ಯ. ಶಿವಲಿಂಗಕ್ಕೆ ಹಾಲು ಮತ್ತು ಮಸೀದಿಯಲ್ಲಿ ಚಾದರವನ್ನು ನಾವು ಹೇಗೆ ಭಕ್ತಿಯಿಂದ ಅರ್ಪಿಸುತ್ತೇವೋ, ಅಂತೆಯೇ ನಾಣ್ಯವನ್ನ ಕೂಡ ಭಕ್ತಿಯಿಂದ ಅರ್ಪಿಸುತ್ತಾರಷ್ಟೇ. ಇನ್ನು ಶವ ಶಿವನ ಸಮಾನವಾಗಿರುವುದರಿಂದ ಹೂವನ್ನು ಎಸೆಯಲಾಗತ್ತೆ.