Friday, July 4, 2025

Latest Posts

C M bommai : ನವೀನ್ ಪಾರ್ಥಿವ ಶರೀರ ಭಾನುವಾರ ಬೆಂಗಳೂರಿಗೆ ಆಗಮನ..!

- Advertisement -

ಬೆಂಗಳೂರು : ಉಕ್ರೇನ್​ನಲ್ಲಿ ರಷ್ಯಾ ಶೆಲ್​ ದಾಳಿಗೆ ಸಾವನ್ನಪ್ಪಿದ್ದ ಹಾವೇರಿ ಮೂಲದ ನವೀನ್ ​​​ (Naveen) ಪಾರ್ಥಿವ ಶರೀರ (Dead Body) ಭಾನುವಾರ ಬೆಳಗ್ಗೆ 3 ಗಂಟೆಗೆ ಬೆಂಗಳೂರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದ್ದಾರೆ. ನವೀನ್​ ಮೃತದೇಹ ಈಗಾಗಲೇ ಪತ್ತೆಯಾಗಿದ್ದು, ಪಾರ್ಥಿವ ಶರೀರ ತರಲು ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಭಾನುವಾರ ಪಾರ್ಥಿವ ಶರೀರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bangalore international Airport)  ತರಲಾಗುವುದು ಎಂದು ತಿಳಿಸಿದರು. ಸಾವನ್ನಪ್ಪಿದ ನವೀನ್​ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್​​ ಅನ್ನು ಕೂಡ ವಿತರಿಸಿದ್ದಾರೆ.
ಇನ್ನು ಆಪರೇಷನ್​ ಗಂಗಾ ಅಡಿಯಲ್ಲಿ ಈಗಾಗಲೇ ಉಕ್ರೇನ್​ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ನವೀನ್​ ಜೊತೆ ಇದ್ದ ಸ್ನೇಹಿತರು ಕೂಡ ಈಗಾಗಲೇ ಸುರಕ್ಷಿತವಾಗಿ ಬಂದು ಇಳಿದಿದ್ದಾರೆ. ಮಗ ಸಾವನ್ನಪ್ಪಿದ್ದು ಆತನ ಪಾರ್ಥಿವ ಶರೀರ ಬಾರದ ನೋವಿನಲ್ಲಿ ಕುಟುಂಬಸ್ಥರು ಇದ್ದಾರೆ. ಈಗಾಗಲೇ ಮೂರು ದಿನದ ಕಾರ್ಯ ಮಾಡಿರುವ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಲು ನವೀನ್​ ಪಾರ್ಥಿವ ಶರೀರಕ್ಕೆ ಎದುರು ನೋಡುತ್ತಿದ್ದಾರೆ. ನವೀನ್​ ಪೋಷಕರಿಗೆ ಸಮಾಧಾನ ಮಾಡಿದ ಸಿಎಂ ಸೇರಿದಂತೆ ಎಲ್ಲಾ ರಾಜಕೀಯ ಮುಖಂಡರಿಗೂ ತಮ್ಮ ಮಗನ ಪಾರ್ಥಿವ ಶರೀರವನ್ನು ತರಿಸುವ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದರು.

- Advertisement -

Latest Posts

Don't Miss