ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ದಿನ ಇಂದು. ಕನ್ನಡ ಚಿತ್ರರಂಗಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಈ ಮಾಸ್ ಹೀರೋ ಮೊದಲ ಸಿನಿಮಾ ಮೂಲಕಾನೇ ಕನ್ನಡ ಸಿನಿಮಾಭಿಮಾನಿಗಳ ಹೃದಯ ಗೆದ್ಬಿಟ್ರು. ನಿರ್ದೇಶಕ ಎಪಿ ಅರ್ಜುನ್ ಡೈರೆಕ್ಷನ್ ಹೇಳಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್ ನಟಿಸಿದ್ದರು.
ರೊಮ್ಯಾಂಟಿಕ್ ಡ್ರಾಮಾ ಕಥೆಯಿದ್ದ ಈ ಚಿತ್ರವನ್ನ ಅಭಿಮಾನಿಗಳು ಮನತುಂಬ ಅಪ್ಪಿಕೊಂಡ್ರು, ಒಪ್ಪಿಕೊಂಡರು. ಇದೀಗ ಈ ಅದ್ಧೂರಿ ಸಿನಿಮಾ ೧೦ ವರ್ಷ ಪೂರೈಸಿದೆ. ಅಷ್ಟೇ ಅಲ್ಲ ನಟ ಧ್ರುವ ಸರ್ಜಾ ಸಹ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದಶಕ ಪೂರೈಸಿದ್ದಾರೆ. ವಿಶೇಷ ಅಂದ್ರೆ ಮೊದಲ ಚಿತ್ರದ ಕಾಂಬಿನೇಶನ್ ಈಗ ೧೦ ವರ್ಷಗಳ ಬಳಿಕ ಮಾರ್ಟಿನ್ ಚಿತ್ರದಲ್ಲಿ ಒಂದಾಗಿದ್ದು, ಎ,ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬೋ ಈ ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆ ಅನ್ನೋದನ್ನ ನೋಡೋದಕ್ಕೆ ಕಾತುರದಿಂದ ಕಾಯ್ತಿದ್ದಾರೆ ಅಭಿಮಾನಿಗಳು.
ಒಟ್ಟಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಎರಡು ಖುಷಿ ವಿಷಯಗಳಿಗೆ ೧೦ ವರ್ಷ ತುಂಬಿದೆ ಈ ದಿನ. ಎನಿವೇ ಚಿತ್ರರಂಗದಲ್ಲಿ ದಶಕ ಪೂರೈಸಿರೋ ಆಕ್ಷನ್ ಪ್ರಿನ್ಸ್ಗೆ ಕರ್ನಾಟಕ ಟಿವಿ ಕಡೆಯಿಂದಲೂ ಶುಭಾಶಯಗಳು.
ನಳಿನಾಕ್ಷಿ ,ಕರ್ನಾಟಕ ಟಿವಿ