ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!

Kerala News:

ಕೇರಳದ  ಕಣ್ಣೂರಿನಲ್ಲಿ ವಿಮಾನಕ್ಕೆ  ಹಕ್ಕಿ ಡಿಕ್ಕಿಯಾಗಿ  ತುರ್ತು  ಭೂಸ್ಪರ್ಶವಾದ ಘಟನೆ ನಡೆದಿದೆ. ಕಣ್ಣೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಪ್‌ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ವಿಮಾನ ತುರ್ತು ಭೂಸ್ಪರ್ಶವಾಗಿದೆ.

ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಟೇಕಾಫ್‌ ಆದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ತಕ್ಷಣ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಕಾರಣ ತಪಾಸಣೆ ಹಾಗು ನಿರ್ವಹಣೆಗಾಗಿ ವಿಮಾನವನ್ನು ಇಳಿಸಲಾಗಿದ್ದು, ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ ಎಂದು  ಹೇಳಲಾಗಿದೆ.

ಶ್ರೀರಂಗಪಟ್ಟಣ ಮಕ್ಕಳ ದಸರಾ ಮತ್ತು ಯುವ ದಸರಾ ಬಗ್ಗೆ ಸಂಪೂರ್ಣ ಮಾಹಿತಿ..

ಮಂಡ್ಯದಲ್ಲಿ ಐತಿಹಾಸಿಕ ವೈಭವಯುತ ದಸರಾ- 2022ಕ್ಕೆ ಚಾಲನೆ..

ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹೀಗೆ ಮಾಡಿ ಡಿಲೀಟ್ ಮಾಡಿಬಿಡಿ..!

About The Author