ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ದಾರುಣ ಸಾವು..

ಹಾಸನ: ಹಾಸನ ಜಿಲ್ಲೆಯ ಅರಿಸೀಕೆರೆ ತಾಲೂಕಿನ ವಡಗೆರಹಳ್ಳಿ ಗ್ರಾಮದಲ್ಲಿ, ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಪ್ರವೀಣ್ (28), ರಾಜ (30) ಮೃತ ದುರ್ದೈವಿಗಳು. ಪ್ರವೀಣ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ರಾಜ ಆಟೋ ಚಾಲಕನಾಗಿದ್ದ.

ನಿನ್ನೆ ಸಂಜೆ ಗಣಪತಿ ವಿಸರ್ಜನೆ ವೇಳೆ ಗ್ರಾಮದ ಹಲವರು ಕೆರೆಗೆ ಇಳಿದಿದ್ದರು. ಹಲವು ವರ್ಷಗಳ ನಂತರ ಗ್ರಾಮದ ಕೆರೆಯಲ್ಲಿ ನೀರು ತುಂಬಿದ್ದು, ಈ ವೇಳೆ ಈಜು ಬಾರದ ಕಾರಣ ರಾಜ ಮತ್ತು ಪ್ರವೀಣ್ ಸಾವನ್ನಪ್ಪಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ ಎಂದು ಸುದೀಪ್..

100 ಕೋಟಿ ಡೀಲ್ ಬಗ್ಗೆ ಮಾತಾಡೋಕ್ಕೆ ಮೋದಿಯವರಿಗೆ ತಾಕತ್ ಇದ್ಯಾ..?

‘ನಾ ಬರಲ್ಲಾ ಅಂದ್ರೆ ಬರಲ್ಲಾ, ಅರಮನೆ ಬಿಟ್ಟು ಕಾಡಿಗೆ ಬರಲ್ಲ’

About The Author