ಹಾಸನ: ಗಂಡ ಇಲ್ಲದ 2 ಮಕ್ಕಳ ತಾಯಿ ವಿಧವೆಗೆ ಬಾಳು ಕೊಡುವುದಾಗಿ ನಂಬಿಸಿ ತಾಳಿಕಟ್ಟಿದ ಭೂಪ, ಈಗ ಮತ್ತೊಂದು ಮದುವೆ ಆಗಲು ಹೋಗಿ ತಾಳಿ ಕಟ್ಟಿದ ನಂತರ ಮೊದಲ ಹೆಂಡತಿಗೆ ಯೋಧನು ಸಿಕ್ಕಿಬಿದ್ದು ಪೊಲೀಸ್ ಅತಿಥಿಯಾದ ಘಟನೆ ಗುರುವಾರದಂದು ಹಾಸನ ನಗರದ ಹೊರ ವಲಯ ಬೆಂಗಳೂರು ರಸ್ತೆ, ಬೂವನಹಳ್ಳಿ ಬಳಿ ಇರುವ ಸಾಧನ ಸಮುದಾಯಭವನದಲ್ಲಿ ನಡೆದಿದೆ.
ನಗರದಲ್ಲಿ ವಾಸವಾಗಿರುವ ಮೊದಲ ಹೆಂಡತಿ ಆಶಾ ಬ್ಯೂಟಿ ಪಾರ್ಲರ್ ಕೆಲಸ ಮಾಡುತ್ತಿದ್ದು, ಈಕೆಯ ಗಂಡ ಸಾವನಪ್ಪಿದ ಮೇಲೆ ಎರಡು ಮಕ್ಕಳೊಂದಿಗೆ ಒಂಟಿಯಾಗಿದ್ದಳು. ದೇಶ ಸೇವೆಯಲ್ಲಿ ತೊಡಗಿರುವ ಕಿರಣ್ ಕುಮಾರ್ ನೊಂದಿಗೆ ಆಶಾಗೆ ಪರಿಚಯವಾಗಿ ಕಳೆದ ಮೂರು ವರ್ಷಗಳಿಂದ ಲವ್ ಡವ್ ನಡೆದಿತ್ತು. ಅದು ಅತೀರೇಕವಾಗಿ 6 ತಿಂಗಳ ಹಿಂದೆ ಈಕೆಯ ಮನೆಯಲ್ಲಿಯೇ ನಾಲ್ಕು ಗೋಡೆಯ ಮಧ್ಯೆ ಯೋಧನು ತಾಳಿ ಕಟ್ಟಿ ಅಧಿಕೃತವಾಗಿ ಸಂಸಾರ ಸಾಗಿಸಲು ಆರಂಭಿಸಿದ್ದನು.
ಕಾರ್ಯದೊತ್ತಡ ನಿರ್ವಹಣೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ: ಡಾ.ಎಚ್.ಎನ್.ಗೋಪಾಲಕೃಷ್ಣ
ದೇಶ ಸೇವೆಯಲ್ಲಿ ಯೋಧನಾಗಿರುವ ಈತ ಕೆಲಸದ ನಿಮಿತ್ತ ಹೋಗಿದ್ದು, ಕಿರಣ್ ಮದುವೆ ಆಗಿರುವ ಬಗ್ಗೆ ಮೊದಲೇ ಮನೆಯಲ್ಲಿ ತಿಳಿದಿತ್ತು ಎಂದು ಹೇಳಲಾಗಿದೆ. ಮನೆಯವರೇ ಸೇರಿ ನಂತರದಲ್ಲಿ ಎರಡನೇ ಮದುವೆಗೆ ಹೆಣ್ಣನ್ನು ನೋಡಿ ಸಿದ್ಧತೆ ಮಾಡಿಕೊಂಡು ಸಂಪ್ರದಾಯದಂತೆ ಮುಂದುವರೆದು ನಗರದ ಹೊರ ವಲಯ ಬೆಂಗಳೂರು ರಸ್ತೆಯ ಬಳಿ ಇರುವ ಸಾಧನ ಸಮುದಾಯ ಭವನದಲ್ಲಿ ಗುರುವಾರ ಮದುವೆ ನಿಶ್ಚಯವಾಗಿ ತಾಳಿ ಕೂಡ ಕಟ್ಟಿದ್ದನು. ವಿಚಾರ ತಿಳಿದ ಮೊದಲ ಹೆಂಡತಿ ಆಶಾ ಮದುವೆ ಮನೆಗೆ ಬಂದು ವಿಚಾರ ತಿಳಿಸಲಾಗಿದೆ.
ಆಶಾ ಹೇಳುವಂತೆ ನನಗೆ ೨ ಲಕ್ಷ ಕೊಡುತ್ತೇನೆ ನಾನು ಮದುವೆ ಆಗುತ್ತಿರುವ ಕಡೆ ನೀನು ಹೋಗಬೇಡ ಎಂದು ಇಬ್ಬರಲ್ಲಿ ಮಾತುಕತೆ ನಡೆದಿದೆ. ಆದರೇ ಆತ ಇನ್ನು 2 ಲಕ್ಷ ರೂಗಳ ಕೊಟ್ಟಿರಲಿಲ್ಲ ಎಂಬಂತೆ ಮಾತುಗಳು ಕೇಳಿ ಬಂದಿತು. ಈ ಬಗ್ಗೆ ಮೊಬೈಲ್ ನಲ್ಲಿ ಮೆಸೆಜು ಕೂಡ ಮಾಡಲಾಗಿದ್ದು, ಕೂಡಲೇ ಮೊಬೈಲ್ ಸೀಜ್ ಆಕೆ ಮಾಡಲು ಒತ್ತಾಯಿಸಿದಳು. ವಿಚಾರ ತಿಳಿದ 112 ಪೊಲೀಸ್ ತುರ್ತು ವಾಹನ ಬಂದು ಮೊದಲ ಹೆಂಡತಿ ಆಶಾ ಮತ್ತು ಹುಡುಗ ಕಿರಣ್ ಕುಮಾರ್ ಮತ್ತು ಇತನ ತಂದೆ ತಾಯಿಯನ್ನು ಕರೆದೊಯ್ಯಲಾಯಿತು.
‘ತಿನ್ನಲ್ಲ, ತಿನ್ನೋಕ್ಕೂ ಬಿಡಲ್ಲ ಎಂದಿದ್ರಿ, ಹಾಗಾದ್ರೆ ಈಗ ನಿಮ್ಮವರೇನು ತಿನ್ನುತ್ತಿದ್ದಾರೆ’..?
ಇದಾದ ಬಳಿಕ ಈಗ ತಾಳಿ ಕಟ್ಟಿದ್ದ ವಧು ಪೊಲೀಸ್ ಠಾಣೆಗೆ ಹೋಗಿ ಮೊದಲು ಮದುವೆಯಾದವಳಿಗೆ ಬಾಳನ್ನು ಕಿರಣ್ ಕೊಡಲಿ ಎಂದು ಒತ್ತಾಯಿಸುವ ಮೂಲಕ ತ್ಯಾಗಮಯಿ ಆಗಿದ್ದಾಳೆ. ಬಡಾವಣೆ ಪೊಲೀಶ್ ಠಾಣೆಯಲ್ಲಿ ಈ ಪ್ರಕರಣ ಇದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಎರಡು ಮಕ್ಕಳಿರುವ ವಿಧವೆಗೆ ಬಾಳು ಕೊಟ್ಟು ತ್ಯಾಗಮಯಿ ಆಗಿದ್ದ ಯೋಧ ಕಿರಣ್ ಕುಮಾರ್ ಮತ್ತೊಂದು ಮದುವೆ ಆಗಲು ಹೋಗಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.

