ಶಿಕ್ಷಕರನ್ನು ಇನ್ನು ಮುಂದೆ ಸರ್,ಮೇಡಂ ಎನ್ನುವಂತಿಲ್ಲ..?!

Kerala News:

ವಿದ್ಯಾರ್ಥಿಗಳನ್ನು ಇನ್ನು ಮುಂದೆ ಅಧ್ಯಾಪಕರನ್ನು ಸರ್, ಮೇಡಂ ಎಂದು ಸಂಬೋಧಿಸದೆ ಟೀಚರ್ ಎಂದು ಕರೆಯಲು ಸೂಚಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ಧೇಆನ ನೀಡಿದೆ. ಶಿಕ್ಷಕರನ್ನು ವಿದ್ಯಾರ್ಥಿಗಳು ಸರ್, ಮೇಡಂ ಎಂದು ಸಂಬೋಧಿಸದೆ ಟೀಚರ್ ಎಂದು ಕರೆಯಲು ಸೂಚಿಸಬೇಕು ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಿದೆ.

ಟೀಚರ್ ಪದದಲ್ಲಿ ಲಿಂಗ ತಟಸ್ಥವಾಗಿ ಇರುವುದರಿಂದ ಈ ಪದ ಸೂಕ್ತವಾಗುತ್ತದೆ. ಹೀಗಾಗಿ ವಿದ್ಯರ‍್ಥಿಗಳು ಶಿಕ್ಷಕರನ್ನು ಸರ್, ಮೇಡಂ ಎನ್ನದೇ ಟೀಚರ್ ಎಂದೇ ಸಂಬೋಧಿಸಬೇಕು ಎಂದು ಸೂಚನೆ ನೀಡಬೇಕು ಎಂದು ಆಯೋಗ ತಿಳಿಸಿದೆ. ಆಯೋಗದ ಮುಖ್ಯಸ್ಥರಾದ ಕೆ.ವಿ. ಮನೋಜ್‌ ಕುಮಾರ್‌ ಹಾಗೂ ಸದಸ್ಯ ಸಿ. ವಿಜಯ್‌ ಕುಮಾರ್‌ ಅವರು ರಾಜ್ಯದ ಶಿಕ್ಷಣ ಇಲಾಖೆಗೆ ಈ ಸೂಚನೆ ನೀಡಿದ್ದಾರೆ. ಶಿಕ್ಷಕರೊಂದಿಗಿನ ಬಾಂಧವ್ಯ ಮತ್ತು ಸಮಾನತೆ ಹೆಚ್ಚಳದ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಪಕ್ಷ ನಾಯಕನಿಗೆ ದೇವಿ ಸಂದೇಶ..?! ಎರಡು ಕ್ಷೇತ್ರದಲ್ಲಿ ಸಿದ್ಧು ಸ್ಪರ್ಧೇ…?!

ಸಾಲಕ್ಕೆ ಹೆದರಿ ಸಾವಿಗೆ ಶರಣಾಗಬೇಡಿ ಎಂದು ಅನ್ನದಾತರಿಗೆ ಧೈರ್ಯ ಹೇಳಿದ ಕುಮಾರಸ್ವಾಮಿ

ಮೆಟ್ರೋ ಕಾಮಗಾರಿಯಿಂದ ಮತ್ತೊಂದು ದುರಂತ…!ಎಚ್ಚೆತ್ತುಕೊಳ್ಳದ ರಾಜಕೀಯ ನಾಯಕರು..?!

About The Author