ಕರೀಮುದ್ದಾನಹಳ್ಳಿ ಗ್ರಾ.ಪಂ ಕರ್ಮಕಾಂಡ: ಒಳಚರಂಡಿ ಗಬ್ಬೆದ್ದು ನಾರುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳು..

Mysuru News: ಮೈಸೂರು: ಕರೀಮುದ್ದಾನಹಳ್ಳಿ  ಗ್ರಾಮಪಂಚಾಯಿತಿಯ ಕರ್ಮಕಾಂಡ ಬಯಲಿಗೆ ಬಂದಿದ್ದು, ಒಳಚರಂಡಿಗಳು ಗಬ್ಬೆದ್ದು ನಾರುತ್ತಿದೆ.

ಹುಣಸೂರು ತಾಲೂಕಿನ   ಕರೀಮುದ್ದಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಹನುಮಂತಪುರ ಗ್ರಾಮದಲ್ಲಿರುವ ಒಳಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಕರೀಮುದ್ದಾನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಎಂ.ಸಿರವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ.

ಅಲ್ಲದೇ, ಶಾಸಕ ಜಿ .ಡಿ. ಹರೀಶ್ ಗೌಡರವರಿಗೆ ಮನವಿ ಮಾಡಿದರು ಕೂಡ ಅಭಿವೃದ್ದಿ ಅಧಿಕಾರಿ ಕುಂಟು ನೆಪ ಹೇಳಿಕೊಂಡು ಪರಿಸ್ಥಿಯನ್ನು ತಿಳಿಗೊಳಿಸದೇ ವಿಫಲರಾಗಿದ್ದಾರೆ.

ಒಳಚರಂಡಿ ಕೊಳೆತು ನಾರುತ್ತಿರುವುದರಿಂದ ಹನುಮಂತಪುರ ಗ್ರಾಮದಲ್ಲಿ ತುಂಬಾ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕುಂಟು ನೆಪ ಹೇಳುತ್ತಿರುವ ಅಭಿವೃದ್ದಿ ಅಧಿಕಾರಿ. ರಾಘವೇಂದ್ರ.ಎಂ.ಸಿ. ರವರು ನಮ್ಮ ಪಂಚಾಯಿತಿ ಬಿಟ್ಟು ತೊಲಗಲಿ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಶೆಟ್ಟರ್ಗೆ ಮೇಯರ್ ಟಾಸ್ಕ್ ನೀಡಿದ ಡಿ.ಕೆ.ಶಿವಕಮಾರ್…?

ಚೆಸ್ಕಾಂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬೇಲೂರು ಶಾಸಕ..

ರಾಜ್ ಬಿ ಶೆಟ್ಟಿ ಅಭಿನಯದ “ಟೋಬಿ” ಚಿತ್ರ ಆಗಸ್ಟ್ 25 ರಂದು ತೆರೆಗೆ .

About The Author