Hassan Political News: ಹಾಸನ: ಹಾಸನದ ನಂದಗೋಕುಲ ಕನ್ವೆನ್ಷನ್ ಹಾಲ್ನಲ್ಲಿ ಕಾಂಗ್ರೆಸ್ ಸಭೆ ನಡೆದಿದ್ದು, ಶಿವಲಿಂಗೇಗೌಡ, ಮಾಧ್ಯಮದ ವಿರುದ್ಧ ಕೆಂಡ ಕಾರಿದ್ದಾರೆ. ಅಲ್ಲದೇ, ಕಾರ್ಯಕರ್ತರಿಗೆ ಮಾಧ್ಯಮದವರ ಕುರಿತು ಎಚ್ಚರಿಕೆ ನೀಡುವ ಮೂಲಕ, ಮಾಧ್ಯಮದವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತನಾಡಿದ ಶಿವಲಿಂಗೇಗೌಡ, ನಿಮ್ಮ ಅಭಿಪ್ರಾಯ ಇದ್ದಾರೆ. ಇಲ್ಲಿ ಇಬ್ಬರು ವರಿಷ್ಠರು ಇದ್ದಾರೆ ಅವರಿಗೆ ಹೇಳಿ. ಇದನ್ನೆ ಟಿವಿ ಅವರು ಹಾಕೊಂಡು ತೋರಿಸುತ್ತಾರೆ, ಸಭೆ ಮಾಡಿದ್ದು ಗೊತ್ತಾಗಲ್ಲ. ಕಾಂಗ್ರೆಸ್ ಸಭೆಯಲ್ಲಿ ರಾಜಣ್ಣ ಚೆಲುವರಾಯಸ್ವಾಮಿ ಸಭೆಯಲ್ಲಿ ಹೊಡೆದಾಟ ಬಡಿದಾಟ. ಎಲ್ಲ ದಿಕ್ಕಾಪಾಲು ಆದ್ರೂ ಅಂತ ಹಾಕ್ತಾರೆ. ಅದಕ್ಕೆ ಯಾಕೆ ಅವಕಾಶ ಮಾಡಿ ಕೊಡ್ತೀರಾ..? ಮಾತು ಆಡೋದು ಇದ್ರೆ ಅವರು ಇಬ್ಬರು ಸಿಗೋಕಿಲ್ಲವಾ ನಿಮಗೆ ಎನ್ನುವ ಮೂಲಕ ಮಾಧ್ಯಮದವರ ಬಗ್ಗೆ ವ್ಯಂಗ್ಯವಾಡಿದ್ದಾರೆ.