Thursday, June 19, 2025

Latest Posts

ಕಮಲ ಮನೆ ಬೂದಿ ಮುಚ್ಚಿದ ಕೆಂಡ – ಪ್ರತಿಪಕ್ಷದ ನಾಯಕ ಯಾರು?

- Advertisement -

Political News: ಬೆಂಗಳೂರು: ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಮಾಡಿದರೂ ಕಮಲ ಪಾಳಯದಲ್ಲಿ ಬೇಗುದಿ ಇನ್ನೂ ಶಮನವಾಗಿಲ್ಲ. ವಿಜಯೇಂದ್ರಗೆ ಪಕ್ಷದ ಚುಕ್ಕಾಣಿ ಕೊಟ್ಟ ನಂತರ ಹಿರಿಯರ ಅಸಮಾಧಾನ ಇನ್ನಷ್ಟು ಹೆಚ್ಚಾಗಿದ್ದು ರಾಜ್ಯಾಧ್ಯಕ್ಷ ಸ್ಥಾನ ಭರ್ತಿ ಬಳಿಕ ಬಿಜೆಪಿಯಲ್ಲಿ ಒಳಗೊಳಗೇ ಕೋಪ, ತಾಪ ಮುನಿಸು ಜೋರಾಗಿದೆ..

ಕಾರ್ಯಕರ್ತರು, ಮೂರನೇ ಹಂತದ ಮುಖಂಡರಿಗೆ ಸಂಭ್ರಮ ಒಂದು ಕಡೆ ಆದರೆ, ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಹಿರಿಯ ನಾಯಕರ ಬೇಗುದಿಯಿಂದಾಗಿ ಕಮಲ ಮನೆ ಬೂದಿ ಮುಚ್ಚಿದ ಕೆಂಡದಂತಾಗಿದೆ.

ರಾಜ್ಯಾಧ್ಯಕ್ಷ ಹುದ್ದೆಯ ಬಿಸಿ ಇರುವಾಗಲೇ ವಿಪಕ್ಷ ನಾಯಕನ ನೇಮಕಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ ಹಿನ್ನೆಲೆ ಇದೀಗ ವಿಪಕ್ಷ ನಾಯಕ ಸ್ಥಾನಕ್ಕೆ ಭಾರೀ ಪೈಪೋಟಿ ಎದುರಾಗಿದೆ.

ಒಬಿಸಿ ಮತ್ತು ಒಕ್ಕಲಿಗ ಸಮುದಾಯಗಳ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮತ್ತೊಂದು ಉನ್ನತ ಸ್ಥಾನವಾದ ವಿಪಕ್ಷ ನಾಯಕನಾಗಲು ಹಲವರು ಕಸರತ್ತು ನಡೆಸುತ್ತಿದ್ದು. ಶಾಸಕರಾದ ಸುನೀಲ್ ಕುಮಾರ್ ಒಬಿಸಿ ಪ್ರತಿನಿಧಿಸುತ್ತಿದ್ದರೆ, ಒಕ್ಕಲಿಗ ಸಮಯದಾಯದಿಂದ ಮೂವರ ಮಧ್ಯೆ ಪೈಪೋಟಿ ಇದೆ. ವಿಪಕ್ಷ ನಾಯಕ ಹುದ್ದೆ ಮೇಲೆ ಒಕ್ಕಲಿಗ ಶಾಸಕರಾದ ಅಶ್ವಥ್ ನಾರಾಯಣ, ಆರಗ ಜ್ಞಾನೇಂದ್ರ, ಆರ್.ಅಶೋಕ್ ಕಣ್ಣಿಟ್ಟಿದ್ದಾರೆ.

ಸಿದ್ದರಾಮಯ್ಯ ಬಿಟ್ಟಿ ಭಾಗ್ಯ ಕೊಟ್ಟು ಅಧಿಕಾರ ಪಡೆದಿದ್ದಾರೆ: ಮುರುಗೇಶ್ ನಿರಾಣಿ

‘ಜನರ ಹಿತವನ್ನು ಮರೆತು, ಸಿಎಮ್ ಡಿಸಿಎಮ್ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ’

ಇಸ್ರೇಲ್- ಹಮಾಸ್ ಯುದ್ಧ: ಸಾವು- ಬದುಕಿನ ಮಧ್ಯೆ 39 ಶಿಶುಗಳ ಹೋರಾಟ

- Advertisement -

Latest Posts

Don't Miss