Dharwad News: ಧಾರವಾಡ: ಧಾರವಾಡದಲ್ಲಿ ಭಾರತೀಯ ಸೇನೆಯ ನಿವೃತ್ಥ ಸೈನಿಕನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಯೋಧನಾಗಿ ಕಲ್ಲಪ್ಪ ಮಾರುತಿ ಕುಂದರಿಗಿ ಎಂಬುವವರು 22 ವರ್ಷಗಳ ಕಾಲ ಸೇವೆ ಸಲ್ಲಿಸಿ, ಧಾರವಾಡಕ್ಕೆ ಬಂದಿದ್ದು, ಇವರಿಗೆ ಹಾರ, ಶಾಲು ಹಾಕಿ, ಆರತಿ ಮಾಡಿ, ಗಾಡಿಯಲ್ಲಿ ಮೆರವಣಿಗೆ ಮಾಡಿ, ಅದ್ದೂರಿ ಸ್ವಾಗತ ಕೋರಲಾಗಿದೆ.
ಕಲ್ಲಪ್ಪ ಅವರು ರೈಲು ನಿಲ್ದಾಣಕ್ಕೆ ಆಗಮಿಸಿದಾಗ, ಮಾಜಿ ಸೈನಿಕರು, ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸ್ವಾಗತ ಕೋರಿದ್ದಾರೆ. ಬಳಿಕ ಅವರ ಮನೆಯವರೆಗೆ ಮೆರವಣಿಗೆ ಮಾಡಿ, ಸ್ವಾಗತ ಕೋರಿದ್ದಾರೆ. ಧಾರವಾಡ ಸಲಕಿನಕೊಪ್ಪ ಗ್ರಾಮದಲ್ಲಿ ಕಲ್ಲಪರ ಮನೆ ಇದ್ದು, ಊರಿನ ಹೆಣ್ಣು ಮಕ್ಕಳು ಇವರಿಗೆ ಆರತಿ ಬೆಳಗಿ, ವಿವಿಧ ವಾದ್ಯಮೇಳಗಳಿಂದ ಇವರನ್ನು ಸ್ವಾಗತಿಸಲಾಗಿದೆ.
ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ
ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್ಹ್ಯಾಂಡ್ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ