Sunday, September 8, 2024

Latest Posts

‘ಅವತ್ತು ರಿಷಬ್ ಬೈದಿದ್ದಕ್ಕೆ ನಾನಿವತ್ತು ಇಲ್ಲಿ ಇದ್ದೀನಿ’

- Advertisement -

ಸಿರಿಯಲ್‌ನಲ್ಲಿ ಆ್ಯಕ್ಟ್ ಮಾಡೋಕ್ಕೆ ಆಗದೇ, ರಂಗಭೂಮಿಯಲ್ಲೇ ಇರಲು ನಿರ್ಧರಿಸಿದ್ದ ನಟ ಪ್ರಮೋದ್‌ ಶೆಟ್ಟಿಯನ್ನ ಮತ್ತೆ ಸಿನಿ ಜಗತ್ತಿಗೆ ಕರೆದು ತಂದಿದ್ದು, ರಿಷಬ್ ಶೆಟ್ಟಿ. ಗೆಳೆಯ ರಿಷಬ್ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸೋಕ್ಕೆ ಕರೆದಾಗ, ಪ್ರಮೋದ್ ನಾನು ಬರೋದಿಲ್ಲಾ ಅಂತಾ ಹೇಳಿದ್ರಂತೆ. ಅದಕ್ಕೆ ರಿಷಬ್, ನಿನಗೆ ಬುದ್ಧಿ ಇಲ್ವಾ, ಹೆಂಡತಿ ಪ್ರೆಗ್ನೆಂಟ್ ಅಂತಾ ಇದ್ದೀಯಾ, ಇನ್ನು ಮಗು ಬಂದ್ರೆ ಎಷ್ಟೆಲ್ಲಾ ಖರ್ಚಿರತ್ತೆ. ಬರೀ 15 ಸಾವಿರದಲ್ಲಿ ಹೇಗೆ ಮನೆ ನಡೆಸ್ತೀಯಾ ಅಂತೆಲ್ಲಾ ಹೇಳಿ, ಚೆನ್ನಾಗಿ ಬೈದಿದ್ದಕ್ಕೆ, ಪ್ರಮೋದ್ ಆ ಸಿನಿಮಾದಲ್ಲಿ ನಟಿಸೋಕ್ಕೆ ಒಪ್ಪಿಕೊಂಡ್ರಂತೆ.

ಇನ್ನು ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ರಮೋದ್ ಲಕ್ ಚೇಂಜ್‌ ಆಯ್ತು. ಇದಾದ ಬಳಿಕ ರಿಕಿ ಸಿನಿಮಾದಲ್ಲಿ ನಟಿಸಿ, ಪ್ರಮೋದ್ ಫೇಮಸ್ ಆದ್ರು. ಅದರಲ್ಲಿ ನಕ್ಸಲೇಟ್‌ ಪಾತ್ರ ಮಾಡಿದ ಪ್ರಮೋದ್‌ರನ್ನ ಸುದೀಪ್ ಅವರು ಹೊಗಳಿದ್ದರಂತೆ. ಇನ್ನು ಪ್ರಮೋದ್‌ಗೆ ತುಂಬಾ ಜನ ಫ್ರೆಂಡ್ಸ್ ಇದ್ದು, ಡೇಟ್ಸ್ ಇಲ್ಲದ ಕಾರಣ, ದೊಡ್ಡ ದೊಡ್ಡ ಸಿನಿಮಾ ಕೈ ಬಿಟ್ಟಿದ್ದೀನಿ ಅಂತಾರೆ ಪ್ರಮೋದ್.

ಅಲ್ಲದೇ ಪ್ರಮೋದ್ ಅವರ ಅಕ್ಕ ಮತ್ತು ಅಣ್ಣನ ಮದುವೆ ಬೆಂಗಳೂರಲ್ಲೇ ಆಗಿದ್ದು. ಆದ್ರೆ ಪ್ರಮೋದ್ ಮದುವೆ ಮಾತ್ರಾ ಕುಂದಾಪುರದಲ್ಲಿ ಆಗಿದ್ದು. ಆಗ ಪ್ರಮೋದ್ ನನ್ನ ಮದುವೆನೂ ಬೆಂಗಳೂರಲ್ಲೇ ಮಾಡಬಹುದಲ್ಲಾ ಅಂತಾ ಅವರ ಅಪ್ಪಂಗೆ ಕೇಳಿದ್ರಂತೆ. ಆಗ ಪ್ರಮೋದ್ ಅವರ ತಂದೆ. ನಾನು ಬೆಂಗಳೂರಲ್ಲಿ ನಿನ್ನ ಮದುವೆ ಮಾಡಿದ್ರೆ, ಇಡೀ ಪ್ಯಾಲೇಸ್ ಗ್ರೌಂಡ್ ತುಂಬಿ ಹೋಗ್ತಿತ್ತು ಅಂದ್ರಂತೆ.

ಯಾಕಂದ್ರೆ ಪ್ರಮೋದ್ ಅವರ ಮದುವೆ ಕುಂದಾಪುರದಲ್ಲಿ ನಡೆದಾಗ, ಬೆಂಗಳೂರಿಂದಲೇ ಮದುವೆಗೆ 100ರಿಂದ 200 ಜನ ಬಂದಿದ್ರಂತೆ. ಇದನ್ನ ನೋಡಿ ಪ್ರಮೋದ್ ತಂದೆಗೆ ಆಶ್ಚರ್ಯವಾಗಿತ್ತಂತೆ. ಹಾಗಾಗಿ ನಿನ್ನ ಮದುವೆ ಕುಂದಾಪುರದಲ್ಲೇ ಮಾಡಿದ್ದು ಒಳ್ಳೆದಾಯ್ತು ಅಂತಾ ಹೇಳಿದ್ರಂತೆ.

- Advertisement -

Latest Posts

Don't Miss