Sunday, September 8, 2024

Latest Posts

ಬೆಳ್ಳಿತೆರೆಯ ಮೇಲೆ ಅಪ್ಪು ಬಯೋಪಿಕ್

- Advertisement -

ಬೆಂಗಳೂರು: ಅಪ್ಪು ಅಭಿಮಾನಿಗಳಿಗೆ ಸಂತೋಷದ ಸುದ್ದಿ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ ಅಪ್ಪುವಿನ ಜೀವನ ಚರಿತ್ರೆ. ಹೌದು ಸ್ನೇಹಿತರೆ ಅಪ್ಪು ಅನ್ನು ಕಳೆದುಕೊಂಡು ದುಃಖದಲ್ಲಿರುವ ನಾಡಿನ ಎಲ್ಲಾ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರು ಇಂತಹ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಅಪ್ಪುವಿನ ಬಯೋಪಿಕ್ ಅನ್ನು ಸಿನಿಮಾ ಮಾಡಬೇಕಾಗಿ ಪತ್ರವೊಂದನ್ನು ಬರೆದಿದ್ದರು, ಅದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಬೆಳ್ಳಿತೆರೆಯ ಮೇಲೆ ಅಪ್ಪುವಿನ ಬಯೋಪಿಕ್ ಅನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲ್ಯದ ಸ್ವಾರಸ್ಯಕರ ಸಂಗತಿಗಳು, ಅಪ್ಪುವಿನ ಹಠ, ತುಂಟತನ, ಸಹನೆ, ಅಪ್ಪ ನೊಂದಿಗಿನ ಒಡನಾಟ, ಅಮ್ಮನೊಂದಿಗೆ ಮಾಡುತ್ತಿದ್ದ ಪ್ರೀತಿಯ ಜಗಳ, ತರಲೆ ತುಂಟಾಟಗಳು,ಅವರ ಸರಳತೆ, ಸೌಮ್ಯತೆ, ಸಜ್ಜನಿಕೆ, ಅವರ ಬಾಲ್ಯದಲ್ಲಿನ ನಟನೆ, ಹಾಗೂ ನಾಯಕನಟನಾಗಲು ಅವರು ಎದುರಿಸಿದ ಸವಾಲುಗಳು, ಅವರ ಸಮಾಜಸೇವೆ, ಅವರು ತೆರೆಯಮರೆಯಲ್ಲಿ ಯಾವ ರೀತಿ ಇರುತ್ತಿದ್ದರು ಎಂಬುದನ್ನು ಅವರ ಬಯೋಪಿಕ್ ಸಿನಿಮಾದಲ್ಲಿ ಎಲ್ಲರೂ ನೋಡಬಹುದಾಗಿದೆ. ಹಾಗೂ ಸಾವಿನಲ್ಲೂ ಸಹ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆಯನ್ನು ಮೆರೆದ ಅವರ ಒಳ್ಳೆಯತನಕ್ಕೆ ಅಪ್ಪು ಬಯೋಪಿಕ್ ಎಲ್ಲರಿಗೂ ಮಾರ್ಗದರ್ಶನವಾಗಲಿದೆ.

- Advertisement -

Latest Posts

Don't Miss