- Advertisement -
ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್ನ ಇಬ್ಬರು ವಿಧ್ಯಾರ್ಥಿಗಳಿಗೆ ಅಭಿನಯ ಚಕ್ರವರ್ತಿ ಸಹಾಯ ಮಾಡುತ್ತಿದ್ದಾರೆ.
ಸುದೀಪ್ ಅವರು ತರುಣ್ ಮತ್ತು ಸುದೀಪ್ ಅನ್ನೋ ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ್ದಾರೆ. ಮಕ್ಕಳು ಸ್ಕೂಲ್ ಫೀಜ್ ಕಟ್ಟಲು ಆಗದೆ ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಸ್ಕೂಲ್ ಫೀಜ್ ಕಟ್ಟದ ಕಾರಣ ಅಡ್ಮೀಷನ್ ಮಾಡಿಕೊಂಡಿರಲಿಲ್ಲ.
ತರುಣ್ ಮತ್ತು ಸುದೀಪ್ ಚಾಮರಾಜನಗರದಲ್ಲಿರುವ ರಘು ಚಾರ್ಲಿ ಎನ್ನುವವರ ಮಕ್ಕಳಾಗಿದ್ದಾರೆ. ರಘು ಚಾರ್ಲಿ ಸಣ್ಣ ಕಲಾವಿದ ಹೀಗಾಗಿ ಸಿನಿಮಾ ಕೆಲಸ ಇಲ್ಲದೆ ಮಕ್ಕಳ ವಿಧ್ಯಾಭ್ಯಾಸಕ್ಕೆ ಕಷ್ಟ ಪಡುತ್ತಿದ್ರು. ಇದನ್ನ ತಿಳಿದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯು ಇಬ್ಬರು ಮಕ್ಕಳು ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದೆ.
- Advertisement -