Hubballi political News: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ತೆ.ಪಾಾಟೀಲ್, ಕಾಂಗ್ರೆಸ್ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬಹಳಷ್ಟು ಜನ ಪಕ್ಷಕ್ಕೆ ಬರುತ್ತಾರೆ. ಕಾಂಗ್ರೆಸ್ ಮನಸ್ಸಿದ್ದವರು ಕಾಂಗ್ರೆಸ್ ಸೇರಲು ಇದು ಪರ್ವಕಾಲ ಎಂದು ಹೇಳುವ ಮೂಲಕ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೆನಕೊಪ್ಪ ಅಂತ ಯುವಕರು ಕಾಂಗ್ರೆಸ್ ಬರಬೇಕು ಅಂತ ಪರೋಕ್ಷವಾಗಿ ಆಫರ್ ಹೆಚ್.ಕೆ.ಪಾಟೀಲ್ ಆಫರ್ ನೀಡಿದ್ದಾರೆ.
ರಾಷ್ಟ್ರದ ಹಿತ ದೃಷ್ಟಿಯಿಂದ ಕಾಂಗ್ರೆಸ್ ಪರವಾಗಿ ಮುನೆನಕೊಪ್ಪ ನಮ್ಮ ಪಕ್ಷದತ್ತ ನೋಡಬೇಕು. ಇಂಡಿಯಾ ಒಕ್ಕೂಟದ ಸಾರಥ್ಯ ನಮ್ಮ ಮಲ್ಲಿಕಾರ್ಜುನ ಖರ್ಗೆ ವರಿಗೆ ಸಿಕ್ಕಿದೆ ಅದಕ್ಕೆ ನಾವು ಹೆಮ್ಮೆಪಡಬೇಕು. ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಅಪಸ್ವರ ಇಲ್ಲ. ಬಿಜೆಪಿಗರು ಶಂಕರಾಚಾರ್ಯರ ಬಗ್ಗೆ ಲಗುವಾಗಿ ಟಿಕೆ ಮಾತನಾಡುತ್ತಿದ್ದಾರೆ. ಅವರು ಯಾರು ರಾಮ ಭಕ್ತರಲ್ಲಾ ಎಂದು ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಸ್ಪಷ್ಟವಾಗಿ ಶಿಸ್ತಿನ ಪಾರ್ಟಿ. ಶಿಸ್ತಿನಂತೆ ನಾವು ನಡೆದುಕೊಳ್ಳುತ್ತಿದ್ದೆವೆ. ಸದ್ಯ ಸಿಎಂ ಬದಲಾವಣೆ ಯಾವುದೇ ವಿಷಯ ಪ್ರಸ್ತಾಪ ಇಲ್ಲ ಹೀಗಾಗಿ ಆ ಬಗ್ಗೆ ನಾನು ಮಾತನಾಡಲ್ಲ. ಈಗ ಆ ವಿಷಯ ಚರ್ಚೆ ಮಾಡುವುದು ಅನವಶ್ಯಕ, ಅನಗತ್ಯ. ರಾಜ್ಯದಲ್ಲಿನ ಅಭಿವೃದ್ಧಿ ಕ್ರಾಂತಿಯಾಗಿದೆ ಸಿಎಂ ಸಿದ್ದರಾಮಯ್ಯ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಹೀಗಾಗಿ ಇದನ್ನು ಡವರ್ಟ್ ಮಾಡಲು ಈ ರೀತಿ ವಿಷಯಗಳ ಹೊರ ಬರುತ್ತಿವೆ. ಸಣ್ಣ ರೀತಿಯಿಂದ, ಅಸಭ್ಯ , ಅಸಂಸ್ಕೃತಿ ಮಾತನಾಡಲಾಗುತ್ತಿದೆ. ಇದನ್ನು ನಾವು ಸಹಿಸವುದಿಲ್ಲ. ಜನರ ಲಕ್ಷ್ಯ ಮರೆಮಾಚಲು, ಹೀಗಾಗಿ ಸರ್ಕಾರ ಅಸೂಯೆ ಮಾತುಗಳನ್ನು ಜನ ಒಪ್ಪುವುದಿಲ್ಲ ಉತ್ತರ ಕೊಡ್ತಾರೆ ಎಂದು ಪಾಟೀಲ್ ಹೇಳಿದ್ದಾರೆ.
ಇನ್ನು ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯ ಬಗ್ಗೆ ಮಾತನಾಡಿದ ಹೆಚ್.ಕೆ.ಪಾಟೀಲ್, ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ. ನಾನು ಚಾಲೆಂಜ್ ಮಾಡುವೆ ಭಾರತ್ ಜೋಡೋ ಯಾತ್ರೆ ಯಂತಹ ಪಾದಯಾತ್ರೆ ಮತ್ತೊಂದು ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ ತಾಂಜೇನಿಯಾದ ಕಿಲಿ ಪೌಲ್
ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್