Movie News: ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ(40) ಸಾವನ್ನಪ್ಪಿದ್ದಾರೆ. ಭವತಾರಿಣಿ ಹಲವು ತಿಂಗಳಿನಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕಿತ್ಸೆಯೂ ನಡೆಯುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ, ಭವತಾರಿಣಿ ನಿಧನರಾಗಿದ್ದಾರೆ. ಈಕೆ ತಮಿಳಿನಲ್ಲಿ ಪ್ರಖ್ಯಾತ ಗಾಯಕಿಯೂ ಆಗಿದ್ದು, ಭವತಾರಿಣಿ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ಸೂಚಿಸಿದೆ.
ಭವತಾರಿಣಿ ಶ್ರೀಲಂಕಾದಲ್ಲಿ ತಮ್ಮ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಕ್ಯಾನ್ಸರ್ಗಾಗಿ ಆಯುರ್ವೇದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕೆ ಜನವರಿ 25ರಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಆಕೆಯ ಪಾರ್ಥೀವ ಶರೀರವನ್ನು ಚೆನ್ನೈಗೆ ತಂದಿದ್ದು, ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
30ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಭವತಾರಿಣಿ ಕಂಠದಾನ ಮಾಡಿದ್ದಾರೆ. ತಂದೆ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದ ರಸಯ್ಯ ಹಾಡಿಗೆ ಕಂಠದಾನ ಮಾಡುವ ಮೂಲಕ ಭವತಾರಿಣಿ ಸಂಗೀತ ಜಗತ್ತಿಗೆ ಕಾಲಿರಿಸಿದ್ದರು. ಭಾರತಿ ಸಿನಿಮಾದ ಹಾಡಿಗಾಗಿ ಇವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಅಲ್ಲದೇ, ರಾಜ್ಯಪ್ರಶಸ್ತಿಗೂ ಭವತಾರಿಣಿ ಭಾಜನರಾಗಿದ್ದರು.
ಪವಿತ್ರಾ ಗೌಡಗೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ ವಿಜಯಲಕ್ಷ್ಮೀ ದರ್ಶನ್
ಮಕ್ಕಳ ವರ್ತನೆಗೆ ಮನನೊಂದು ಸಾಕುಪ್ರಾಣಿ ಹೆಸರಿಗೆ 23 ಕೋಟಿ ರೂ. ಆಸ್ತಿ ಬರೆದಿಟ್ಟ ವೃದ್ಧೆ