Tuesday, April 16, 2024

Latest Posts

‘ಸಿಎಂರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’- ಶಾಸಕ ವಿವಾದಾತ್ಮಕ ಹೇಳಿಕೆ

- Advertisement -

ಬೆಳಗಾವಿ: ಸಿಎಂ ಕುಮಾರಸ್ವಾಮಿಯವರ ಮಾನಸಿಕ ಸ್ಥಿತಿ ಸರಿಯಿಲ್ಲ, ಹೀಗಾಗಿ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಅಂತ ಬಿಜೆಪಿ ಶಾಸಕ ದುರ್ಯೋದನ ಐಹೊಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗ್ರಾಮವಾಸ್ತವ್ಯದ ವೇಳೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾದ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ದುರ್ಯೋದನ ಐಹೊಳೆ, ಸಿಎಂ ಕುಮಾರಸ್ವಾಮಿಯವರ ಮಾನಸಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಅವರನ್ನು ಧಾರವಾಡದ ಮಾನಸಿಕ ಆಸ್ಪತ್ರೆಗೆ ಕಳುಹಿಸಬೇಕು. ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡೋ ಬದಲು ಧಾರವಾಡ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ್ರೆ ಎಲ್ಲವೂ ಸರಿಹೋಗುತ್ತೆ ಅಂತ ವ್ಯಂಗ್ಯ ಮಾಡಿದ್ರು.

ಇದೇ ವೇಳೆ ಮಾತನಾಡಿದ ಶಾಸಕ ದುರ್ಯೋದನ ಐಹೊಳೆ, ರಾಜ್ಯದಲ್ಲಿ ಸದ್ಯ ಮಳೆಯಾಗುತ್ತಿರೋ ಸಮಯದಲ್ಲಿ ಸಿಎಂ ಗ್ರಾಮವಾಸ್ತವ್ಯ ಮಾಡ್ತಿದ್ದಾರೆ. ಆದ್ರೆ ಎರಡು ಮೂರು ತಿಂಗಳ ಹಿಂದೆ ಬರಗಾಲವಿತ್ತು ಆಗ ಗ್ರಾಮವಾಸ್ತವ್ಯವೂ ಮಾಡಲಿಲ್ಲ, ಹಣವನ್ನೂ ಬಿಡುಗಡೆ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಪಕ್ಷಕ್ಕೆ ಮುಖ್ಯಮಂತ್ರಿಯಲ್ಲ, ರಾಜ್ಯಕ್ಕೆ ಮಂತ್ರಿ ಅನ್ನೋದನ್ನ ತಿಳಿದುಕೊಳ್ಳಬೇಕು ಅಂತ ಲೇವಡಿ ಮಾಡಿದ್ರು.

ಚುನಾವಣೆಗೆ ಸಿದ್ದರಾಮಯ್ಯ ಕೂಡ ರೆಡಿಯಾಗಿದ್ದಾರಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=H5kgDBoq3y0

- Advertisement -

Latest Posts

Don't Miss