Friday, June 20, 2025

Latest Posts

ಸಂಸದೆ ಸುಮಲತಾ ಭೇಟಿ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಿಷ್ಟು..

- Advertisement -

Political News: ಸಂಸದೆ ಸುಮಲತಾ ಅಂಬರೀಷ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗಿದ್ದು, ಮಂಡ್ಯದಲ್ಲಿ ಜೆಡಿಎಸ್‌ಗೆ ಸಪೋರ್ಟ್ ಮಾಡಲು ವಿನಂತಿಸಿದ್ದಾರೆ.

ಮಂಡ್ಯ ಸಂಸದೆಯಾಗಿರುವಂಥ ಸುಮಲತಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಭೇಟಿ ಮಾಡಿ ಮಾತನಾಡಬೇಕಿರುವುದು ನನ್ನ ಕರ್ತವ್ಯ. ಬದಲಾಗಿರುವಂಥ ರಾಜಕಾರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕೇಂದ್ರದ ವರಿಷ್ಠರು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಂಸದರನ್ನು ಭೇಟಿ ಮಾಡಿ ಅವರ ಸಹಕಾರ ಕೇಳಬೇಕಾಗಿದ್ದು, ನನ್ನ ಕರ್ತವ್ಯ ಎಂದು ವಿಜಯೇಂದ್ರ ಹೇಳಿದ್ದಾರೆ.

ಸಾಕಷ್ಟು ವಿಚಾರಗಳನ್ನು ನಾವು ಚರ್ಚೆ ಮಾಡಿದ್ದೇವೆ. ಸುಮಲತಾ ಅವರು ಕೂಡ ಸಕಾಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ತಮ್ಮ ಅಭಿಮಾನಿಗಳ ಜೊತೆ ಚರ್ಚಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನನಗಂತೂ ವಿಶ್ವಾಸವಿದೆ. ಅವರು ನಮ್ಮ ಜೊತೆಲಿರುತ್ತಾರೆ. ನಮ್ಮ ಪಕ್ಷಕ್ಕೂ ಕೂಡ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಾರೆ ಎಂದರು.

ಅಲ್ಲದೇ, ಇದು ಅವರಿಗೆ ತಾತ್ಕಾಲಿಕ ಹಿನ್ನಡೆ ಅಂತಾ ಅನ್ನಿಸಬಹುದು. ಆದರೆ ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ಅವರು ಓರ್ವ ಸಂಸದರಾಗಿ ಅವರ ಅಭಿಮಾನಿಗಳ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಾಗುತ್ತದೆ. ನಾನೂ ಕೂಡ ಅದೇ ಸಲಹೆ ಕೊಟ್ಟಿದ್ದೇನೆ. ಒಟ್ಟಾರೆ ನಮ್ಮ ಚರ್ಚೆಗಳು ಒಳ್ಳೆ ರೀತಿಯಲ್ಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸಂಸದೆ ಸುಮಲತಾ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

ಜೆಡಿಎಸ್ ಎಲ್ಲಿದೆ ಅಂತಾ ತೋರಿಸೋ ಸಾಮರ್ಥ್ಯ ‌91 ವರ್ಷದ ದೇವೇಗೌಡರಲ್ಲಿದೆ: ಸಿದ್ದರಾಮಯ್ಯಗೆ ಹೆಚ್ಡಿಡಿ ಟಾಂಗ್‌

ಬಿಜೆಪಿ- ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ

- Advertisement -

Latest Posts

Don't Miss