Sandalwood news:
ಹ್ಯಾಟ್ರಿಕ್ ಹಿರೊ ಶಿವರಾಜಕುಮಾರ್ ಜೊತೆ ತೆರೆ ಹಂಚಿಕೊಳ್ಳಲು ಬೆಂಗಳೂರಿಗೆ ಆಗಮಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಚಂದನವನಕ್ಕೆ ಕಾಲಿಟ್ಟಿದ್ದಾರೆ.ಹೌದು ವಿಕ್ಷಕರೆ ಹ್ಯಾಟ್್ಇಕ್ ಹೀರೋ ಶಿವಣ್ಣ ನವರು ಶ್ರೀನಿ ನಿರ್ದೆಶನದ ಘೋಸ್ಟ್ ಸಿನಿಮಾದಲ್ಲಿ ನಟಿಸುತಿದ್ದು ಬಾಲಿವುಡ್ನ ಹಿರಿಯನಟ ಅನುಪಮ್ ಖೇರ್ ಕನ್ನಡದ ಘೋಸ್ಟ್ ಇನ್ನುವ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಇನ್ನು ಈ ಸಿನಿಮಾದ ಚಿತ್ರಿಕರಣಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಅನುಪಮ್ ಖೇರ್ ಅವರು ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ತಮ್ಮ ಆಡಿಷನ್ ಇದ್ದಂತೆ ಎಂದಿದ್ದಾರೆ.
ಇಷ್ಟು ದಿನದ ಬಳಿಕ ಕನ್ನಡ ಚಿತ್ರರಂಗಕ್ಕೆ ಬರಲು ಕಾರಣವೇನು ಇಷ್ಟುದಿನ ಬೇಕೆತ್ತಾ ಎಂದು ಮಾಧ್ಯಮಗೋಷ್ಟಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅನುಪಮ್ ಖೇರ್ ನನಗೆ ಈ ಮೊದಲು ಉಪೇಂದ್ರ ಅವರಿಂದ ಅವರ ಸಿನಿಮಾಗೆ ಆಫರ್ ಬಂದಿತ್ತು ಆದರೆ ದಿನಾಂಕಗಳ ಕೊರತೆಯಿಂದಾಗಿ ಆಗಲಿಲ್ಲ .ಅದರೆ ನಿರ್ದೆಶಕ ಶ್ರೀನಿಯವರು ನನಗೆ ಸ್ಕ್ರಿಪ್ಟ್ ಕಳುಹಿಸಿ ನನ್ನ ಹಿಂಬಾಲಲಿಸಿದ ರೀತಿ ನನಗೆ ಇಷ್ಟವಾಯಿತು ಇನ್ನು ಶಿವರಾಜ್ ಕುಮಾರ್ ಅವರ ಜೊತೆ ನಡಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಭಾ ಸಂತೋಷವಾಗಿದೆ,
ಜೊತೆಗೆ ಈ ಸಿನಿಮಾದ ಎರಡನೆ ಭಾಗದಲ್ಲಿ ನನ್ನದು ಮುಖ್ಯ ಪಾತ್ರ ಇದೆ ಎಂದ ಹೇಳಿಕೊಂಡಿದ್ದಾರೆ.
ಇನ್ನು ಕನ್ನಡ ಸಿನಮಾದಲ್ಲಿ ನಟಿಸಲು ಮುಂದಾಗಿರುವ ಬಾಲಿವಡ್ ನಟ ಅನುಪಮ್ ಖೇರ್ ಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ
ಪ್ರೀತಿಯಲ್ಲಿ ಬಿದ್ದು ಸಂಸಾರದಲ್ಲಿ ತೇಲಲು ಸಿದ್ದವಾಗಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ