Tuesday, November 11, 2025

ಕ್ರೈಂ

ತಮ್ಮನ ಜೊತೆ ಗಂಡನ ಕೊಲೆಗೆ ಐನಾತಿ ಪತ್ನಿಯ ಮಾಸ್ಟರ್‌ ಪ್ಲ್ಯಾನ್‌!

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಮೈಸೂರಿನ ನಂಜನಗೂಡಿನಲ್ಲಿ ಗಂಡ–ಹೆಂಡತಿ ಜಗಳ ಕೊಲೆ ಯತ್ನದ ಹಂತಕ್ಕೆ ತಲುಪಿದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸಂಗೀತಾ ಎಂಬ ಮಹಿಳೆ ತನ್ನ ಗಂಡ ರಾಜೇಂದ್ರನನ್ನು ಕೊಲ್ಲಲು ಪ್ಲ್ಯಾನ್ ರೂಪಿಸಿದ್ದಾಳೆ. ಆದರೆ ಆ ಪ್ಲ್ಯಾನ್ ಉಲ್ಟಾ ಹೊಡೆದು ಗಂಡ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂಜನಗೂಡಿನ ನಿವಾಸಿ ರಾಜೇಂದ್ರ...

ಅಂತಿಮ ಘಟ್ಟಕ್ಕೆ ಧರ್ಮಸ್ಥಳ ಕೇಸ್‌ – ಸೂತ್ರಧಾರನ ಬೆನ್ನತ್ತಿದ SIT ಟೀಂ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನಿಗೂಢ ಸಾವುಗಳ ಆರೋಪಗಳಿಗೆ, ಇದುವರೆಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಬೇರೆ ದಾರಿಯಲ್ಲಿ ತನಿಖೆ ಮಾಡಲು ಮುಂದಾಗಿದ್ದಾರೆ. ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು, ಸಂಚು ರೂಪಿಸಲಾಗಿದೆಯೇ ಎಂಬುದರತ್ತ ತನಿಖೆ ನಡೆಸುತ್ತಿದ್ದಾರೆ. ದೂರುದಾರ ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ? ಇಂತಹ ಗಂಭೀರ ಆರೋಪಗಳನ್ನು ಮಾಡಲು...

ಅಂಗೈಯಲ್ಲಿ ‘ಸಾಕ್ಷಿ’ ಬರೆದು ವೈದ್ಯೆ ಆತ್ಮಹತ್ಯೆ!

ಮಹಾರಾಷ್ಟ್ರ : ಸತಾರಾ ಜಿಲ್ಲೆಯಲ್ಲಿ ವೈದ್ಯೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಅವರ ವಿರುದ್ಧ...

ಒಂದೇ ದಿನ.. 1 ಅಪಘಾತ.. 1 ಕುಟುಂಬ.. 4 ಸಾವು

ಬರುಡುಗುಂಟೆ ಬಳಿ ನಡೆದ ಶಾಲಾ ಬಸ್ ಹಾಗೂ ಬೈಕ್ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಮತ್ತೊಂದು ಸಂಕಟ ಅಂದ್ರೆ, ಮಹಿಳೆಯೊಬ್ರು ತನ್ನ ಇಡೀ ಕುಟುಂಬವನ್ನೇ ಕಳೆದುಕೊಂಡು ಅನಾಥವಾಗಿದ್ದಾರೆ. ಆ ಅಪಘಾತದಲ್ಲಿ ಬಲಿಯಾದವರು ಆ ಮಹಿಳೆಯ ತಂದೆ, ಗಂಡ, ಮಗ ಹಾಗೂ ತಮ್ಮ. ತನ್ನವರನ್ನೆಲ್ಲಾ ಕಳೆದುಕೊಂಡು ಆ ಮಹಿಳೆಯ ಆಕ್ರಂದನ ಮುಗಿಲುಮುಟ್ಟಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ...

ಕುಡಿದು ರಂಪಾಟ.. ಕೊಲೆಗಾರ ಬೈಕ್ ಸವಾರ

22 ಮಂದಿಯ ಸಜೀವ ದಹನ. ಕರ್ನೂಲ್‌ ಬಸ್‌ ದುರಂತಕ್ಕೆ ಬೈಕ್‌ ಸವಾರನ ಯಡವಟ್ಟೇ ಕಾರಣ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ. ರಾಂಗ್‌ ರೂಟ್‌ನಲ್ಲಿ ಬಂದು ಬಸ್‌ಗೆ ಡಿಕ್ಕಿಯೊಡೆದಿದ್ದ ಬೈಕರ್‌, ಕುಡಿದು ಬೈಕ್‌ ರೈಡ್‌ ಮಾಡಿದ್ದು ಪತ್ತೆಯಾಗಿದೆ. ದುರಂತಕ್ಕೂ ಮುನ್ನ ಪೆಟ್ರೋಲ್‌ ಬಂಕ್‌ವೊಂದಕ್ಕೆ ಹೋಗಿದ್ದ ಶಿವಶಂಕರ್‌, ಕುಡಿದುಕೊಂಡು ಹೋಗಿರುವುದು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಿವಶಂಕರ್‌ ವಿಡಿಯೋವೊಂದು ವೈರಲ್‌ ಆಗಿದೆ....

ಒಟ್ಟಿಗೆ ಸ್ನಾನಕ್ಕೆ ಹೋದ ಅಕ್ಕ-ತಂಗಿ ದಾರುಣ ಸಾವು

ಗ್ಯಾಸ್‌ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಅಕ್ಕ-ತಂಗಿ ಮೃತಪಟ್ಟಿರುವ ಘಟನೆ, ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಅಲ್ತಾಫ್ ಪಾಷ ಕುಟುಂಬ ನಿರ್ವಹಣೆಗಾಗಿ, ಪತ್ನಿ- ನಾಲ್ವರು ಹೆಣ್ಣುಮಕ್ಕಳೊಡನೆ ಬೆಟ್ಟದಪುರದಿಂದ ಪಿರಿಯಾಪಟ್ಟಣಕ್ಕೆ ಬಂದು, ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ವಾರದ ಹಿಂದೆಯಷ್ಟೇ ಪಿರಿಯಾಪಟ್ಟಣದ ಜೋನಿಗರ ಬೀದಿಯಲ್ಲಿ ಹೊಸ ಬಾಡಿಗೆ ಮನೆಗೆ ಬಂದಿದ್ದರು. ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಸಹೋದರಿಯರು ಒಟ್ಟಿಗೆ...

ರಾಂಗ್‌ ರೂಟ್‌ನಲ್ಲಿ ಬಂದ ಬೈಕ್ ಸವಾರನೇ ಕೊಲೆಗಾರ?

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಯಾರೂ ಊಹಿಸದ ಘನಘೋರ ದುರಂತವೊಂದು ನಡೆದು ಹೋಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಆ 40 ನಿಮಿಷಗಳ ಕಾಲ ರವ ರವ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಎಸಿ ಸ್ಲೀಪರ್‌ ಬಸ್‌ ಹೊತ್ತಿಉರಿದಿದ್ದು, 19 ಮಂದಿ ಪವಾಡ ಸದಶ್ಯದಂತೆ ಬದುಕುಳಿದಿದ್ದಾರೆ. ಬೆಳಗಿನ ಜಾವ 3.30ರ ಸುಮಾರಿಗೆ ಎಲ್ಲರೂ...

ಕೊಲೆ ಬಳಿಕ 6 ತಿಂಗಳು ಮಹೇಂದ್ರ ಹೋಗಿದ್ದೆಲ್ಲಿ?

ಬೆಂಗಳೂರಲ್ಲಿ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಾ ಇದೆ. ಇದೀಗ ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ. ಆರೋಪಿ ಪತಿ ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ತನಿಖೆ ವೇಳೆ ಹಲವಾರು...

ಬೆಂಕಿ ಹೊತ್ತಿಕೊಂಡಿದ್ದೇಗೆ? ಅಸಲಿಗೆ ಆಗಿದ್ದೇನು?

ಕರ್ನೂಲ್‌ ಬಸ್‌ ದುರಂತದಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. ಈ ಭೀಕರ ದುರಂತದಲ್ಲಿ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಪಾರಾಗಿದ್ದಾರೆ. ಈ ಘಟನೆ ನಡೆದಿದ್ದು ಹೇಗೆ ಎಂಬುದನ್ನು, ಪ್ರತ್ಯಕ್ಷವಾಗಿ ಕಂಡ ಹಾರಿಕಾ ವಿವರಿಸಿದ್ದಾರೆ. ಈ ಘಟನೆ ಸುಮಾರು ಬೆಳಗಿನ ಜಾವ 3ರಿಂದ 3,30ರ ಸುಮಾರಿಗೆ ಸಂಭವಿಸಿದೆ. ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಘಟನೆ ಸಂಭವಿಸಿದಾಗ...

ಯಮಸ್ವರೂಪಿ ಬಸ್‌ಗೆ ನಾಲ್ವರು ಬಲಿ ‌

ಬೈಕ್ ಮತ್ತು ಸ್ಕೂಲ್‌ ವ್ಯಾನ್‌ ನಡುವೆ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಬಳಿ ಸಂಭವಿಸಿದೆ. ಮದುವೆಗೆಂದು ತಲಕಾಯಲಬೆಟ್ಟಕ್ಕೆ ಬೈಕ್‌ನಲ್ಲಿ, ಇಬ್ಬರು ಪುರುಷರು ಮೂರು ಮಕ್ಕಳೊಂದಿಗೆ ಹೋಗುತ್ತಿದ್ರು. ಆ ವೇಳೆ ಖಾಸಗಿ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು...
- Advertisement -spot_img

Latest News

ಕೆಂಪುಕೋಟೆ ಬಳಿ ಭಾರೀ ಸ್ಫೋಟ — 10 ಸಾವು, 24ಕ್ಕೂ ಹೆಚ್ಚು ಮಂದಿಗೆ ಗಾಯ

ದೆಹಲಿ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಎರಡು ಕಾರುಗಳು ಸ್ಫೋಟಗೊಂಡ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು...
- Advertisement -spot_img