Tuesday, May 26, 2026

ಕಾನೂನು

ವಾಸಂತಿ ಇನ್ನೂ ಬದುಕಿದ್ದಾಳೆ ಎಂದ ಸುಜಾತಾ ಭಟ್

ಧರ್ಮಸ್ಥಳದ ಪ್ರಕರಣದಲ್ಲಿ ಸಂಚಲನ ಸೃಷ್ಟಿಸಿದ್ದ ಸುಜಾತಾ ಭಟ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬುರುಡೆ ಗ್ಯಾಂಗ್‌ ಜೊತೆ ಹೋಗಿ ತಪ್ಪು ಮಾಡಿದ್ದೇನೆ. ಆ ಪಶ್ಚಾತ್ತಾಪ ನನಗೆ ಈಗಲೂ ಕಾಡುತ್ತಾ ಇದೆ. 60 ವರ್ಷದ ಜೀವನದಲ್ಲಿ ಇದೊಂದು ಕಪ್ಪುಚುಕ್ಕೆ. ಉಳಿದ ಜೀವನವನ್ನು ಚೆನ್ನಾಗಿ ಮಾಡುವ ಆಸೆ ಇದೆ. ಮುಂದಿನ ವಾರ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವರ ದರ್ಶನ...

ಸುಪ್ರೀಂಕೋರ್ಟ್‌ ಚೀಫ್‌ ಜಸ್ಟೀಸ್‌ ಮೇಲೆ ಶೂ ಎಸೆದ ವಕೀಲ

ಸುಪ್ರೀಂಕೋರ್ಟ್‌ನಲ್ಲಿ ಇವತ್ತು ಯಾರೂ ಊಹಿಸದ ಘಟನೆಯೊಂದು ನಡೆದಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ, ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠದತ್ತ ಶೂ ಎಸೆಯಲಾಗಿದೆ. ಚೀಫ್‌ ಜಸ್ಟೀಸ್‌ ಬಿ.ಆರ್‌. ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದು, ನ್ಯಾಯ ಪೀಠದ ಎದುರೇ ನಿಂತು ಶೂ ಎಸೆಯಲಾಗಿದೆ. ಶೂ ಎಸೆದಾತನನ್ನ ವಕೀಲ ರಾಜಶೇಖರ್‌ ಕಿಶೋರ್‌ ಎಂಬುದಾಗಿ ಗುರುತಿಸಲಾಗಿದೆ. ವಿಚಾರಣೆ ಆರಂಭವಾಗ್ತಿದ್ದಂತೆ ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ...

ದರ್ಶನ್‌ ಕೇಸ್‌ನಲ್ಲಿ 3 ಚಾರ್ಜ್‌ಶೀಟ್‌

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಮತ್ತೊಂದು ಬಿಗ್‌ ಶಾಕ್‌ ಕಾದಿದೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ, 3 ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಇದೀಗ ಮೂರು ಪ್ರಕರಣಗಳ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆಗೆ, ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಜೊತೆ, ದರ್ಶನ್‌ ಟೀ, ಸಿಗರೇಟ್‌...

ಬಿಹಾರ ಚುನಾವಣೆಗೆ ಮುಹೂರ್ತ ಯಾವಾಗ?

ಇಡೀ ದೇಶದ ಚಿತ್ತ ಬಿಹಾರ ಚುನಾವಣೆಯತ್ತ ನೆಟ್ಟಿದೆ. ಕೇವಲ ಇನ್ನೆರಡು ದಿನಗಳಲ್ಲಿ ದಿನಾಂಕ ನಿಗಧಿಯಾಗುವ ಸಾಧ್ಯತೆ ಇದೆ. ಈಗಾಗಲೇ ಚುನಾವಣಾ ಆಯೋಗ ಬಿಹಾರ ಎಲೆಕ್ಷನ್‌ಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಅಂದುಕೊಂಡಂತೆ ಆದ್ರೆ ನಾಳೆ ಅಥವಾ ನಾಡಿದ್ದು ಚುನಾವಣಾ ದಿನಾಂಕ ಘೋಷಿಸಬಹುದು. ನವೆಂಬರ್‌ 22ರೊಳಗೆ ಚುನಾವಣೆ ಕೊನೆಗೊಳ್ಳಲಿದೆ ಅಂತಾ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್, ಪಾಟ್ನಾದಲ್ಲಿ ನಡೆದ...

ಸಚಿವ K.J. ಜಾರ್ಜ್‌ ವಿಶೇಷ ಕರ್ತವ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ವಿಶೇಷ ಕರ್ತವ್ಯಾಧಿಕಾರಿ ಜ್ಯೋತಿ ಪ್ರಕಾಶ್, ‌ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜ್ಯೋತಿ ಪ್ರಕಾಶ್ ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದಾರೆ. ಕೆಪಿಟಿಸಿಎಲ್‌‌ ಎಸಿ ಕಾಮಗಾರಿಗೆ ಎನ್‌ಒಸಿ ನೀಡಲು, 1 ಲಕ್ಷ ಲಂಚಕ್ಕೆ ಡಿಮ್ಯಾಂಡ್‌ ಮಾಡಿದ್ರು ಎನ್ನಲಾಗಿದೆ. ಅಡ್ವಾನ್ಸ್‌ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಿದ್ದು, ಜ್ಯೋತಿ ಪ್ರಕಾಶ್‌ ರೆಡ್‌ ಹ್ಯಾಂಡ್‌ ಆಗಿ...

ಹೆಂಡ್ತಿಗೆ ಜೈಲಿಗೆ ಬರಬೇಡ ಎಂದ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಹಲವು ದಿನಗಳಿಂದ ಸೆರೆವಾಸದಲ್ಲಿರುವ ನಟ ದರ್ಶನ್‌ಗೆ, ನರಕದಂತ ಸ್ಥಿತಿ ಎದುರಾಗಿದೆ. ಹೆಚ್ಚುವರಿ ಹಾಸಿಗೆ, ದಿಂಬಿಗಾಗಿ ಕೋರ್ಟ್‌ ಮೊರೆ ಹೋದ್ರೂ, ಜೈಲಾಧಿಕಾರಿಗಳು ಕೊಟ್ಟಿಲ್ಲ ಎನ್ನಲಾಗಿದೆ. ಇನ್‌ಫೆಕ್ಷನ್‌ಗೆ ಒಳಗಾಗಿರುವ ದರ್ಶನ್‌ ಅಕ್ಷರಶಃ ಕುಸಿದು ಹೋಗಿದ್ದಾರೆ. ಅಕ್ಟೋಬರ್‌ 3ರಂದು ಜೈಲಿನಲ್ಲಿರುವ ದರ್ಶನ್‌ರನ್ನು, ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದಾರೆ....

ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್ಸ್‌ಗೆ ಶಾಕ್!

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಎಸ್‌ಐಟಿ ತನಿಖೆ, ಬೇರೆಯದ್ದೇ ತಿರುವು ಪಡೆದುಕೊಂಡಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್‌, ಜಯಂತ್ ವಿಚಾರಣೆ ಬಳಿಕ, ಅಧಿಕಾರಿಗಳು ಯೂಟ್ಯೂಬರ್‌ಗಳ ಬೆನ್ನು ಬಿದ್ದಿದ್ದಾರೆ. ಎಂ.ಡಿ. ಸಮೀರ್‌, ಹಾಸನ ಮೂಲದ ಅಭಿಷೇಕ್‌ ಸೇರಿದಂತೆ 5ಕ್ಕೂ ಹೆಚ್ಚು ಯೂಟ್ಯೂಬರ್‌ಗಳ ವಿಚಾರಣೆ ನಡೀತಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ, ಈ...

ಬದುಕಿರೋ ವ್ಯಕ್ತಿಗೆ ಮರಣ ಪ್ರಮಾಣಪತ್ರ

ಕೋಲಾರ ನಗರಸಭೆ ಅಧಿಕಾರಿಗಳು ಭಾರೀ ಯಡವಟ್ಟು ಮಾಡಿದ್ದಾರೆ. ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರಂತೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಶಾಸಕ ಕೊತ್ತನೂರು ಮಂಜುನಾಥ್ ಸೂಚಿಸಿದ್ದಾರೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನ, ಸದಸ್ಯರಾದ ಸೂರಿ ಹಾಗೂ ಮಂಜುನಾಥ್‌ ಪ್ರಸ್ತಾಪಿಸಿದ್ರು. ನಗರಸಭೆ ಸಿಬ್ಬಂದಿಯ ಲಾಗಿನ್‌ ಐಡಿ, ಪಾಸ್‌ವರ್ಡ್‌ ಬೇರೊಬ್ಬರ ಕೈಯಲ್ಲಿದ್ದು,...

ಜೈಲಲ್ಲಿ ದರ್ಶನ್‌ಗೆ ಪಲ್ಲಂಗ ಕೊಡ್ಬೇಕಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಾಕ್ ಆಗಿದ್ದಾರೆ. ಸೆರೆವಾಸದಲ್ಲಿರುವ ದರ್ಶನ್‌ಗೆ ಮತ್ತಷ್ಟು ದಿನಗಳು ಸಂಕಷ್ಟ ತಪ್ಪಿದಲ್ಲ. ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್‌ ಅವರು ಹೆಚ್ಚುವರಿ ದಿಂಬು, ಹಾಸಿಗೆಯ ಸೌಲಭ್ಯ ಕೋರಿ ಮನವಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್‌ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದ್ದು, ವಾದ, ಪ್ರತಿವಾದ ತಾರಕಕ್ಕೇರಿದೆ. ಕೋರ್ಟ್‌ನಲ್ಲಿ ಕಳೆದ ಬಾರಿಯ...

ಕೋರ್ಟ್‌ನಲ್ಲಿ ತಿಮರೋಡಿ ಭವಿಷ್ಯ

ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ತಲೆ ಮೇಲೆ, ಎರಡೆರಡು ತೂಗುಗತ್ತಿ ನೇತಾಡುತ್ತಿದೆ. ದಕ್ಷಿಣ ಕನ್ನಡದಿಂದಲೇ ಗಡಿಪಾರು ಮಾಡಲಾಗಿದೆ. ಮತ್ತು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಸೆಪ್ಟೆಂಬರ್‌ 21, 25ರಂದು ವಿಚಾರಣೆಗೆ ಬರಲು ನೋಟಿಸ್‌ ನೀಡಲಾಗಿತ್ತು. ಆದ್ರೆ ತಿಮರೋಡಿ ಗೈರಾಗಿದ್ರು. ಇದೀಗ 3ನೇ ಬಾರಿ ನೋಟಿಸ್‌ ನೀಡಿದ್ದು ವಿಚಾರಣೆಗೆ...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img