Friday, July 4, 2025

ರಾಜ್ಯ

ಕಾಂಗ್ರೆಸ್ ಮೇಲೆ ಮೋದಿ ಮತ್ತೊಂದು ಬಾಣ- ಕೈ ಮೇಲೆ ’ನೌಕಾ’ಸ್ತ್ರ

ನವದೆಹಲಿ: ರಾಜೀವ್ ಗಾಂಧಿ ತಾವು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್ ಎಸ್ ವಿರಾಟ್’ ಅನ್ನು ತಮ್ಮ ಸ್ವಂತ ಟ್ಯಾಕ್ಸಿ ರೀತಿ ಬಳಸಿಕೊಂಡಿದ್ರು ಅಂತ ಪ್ರಧಾನಿ ಮೋದಿ  ಹೊಸದೊಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ರಾಜೀವ್ ಗಾಂಧಿ ಸಾಯುವಹೊತ್ತಿಗೆ ನಂಬರ್ 1 ಭ್ರಷ್ಟಾಚಾರಿಯಾಗಿದ್ರು ಅನ್ನೋ ಮೋದಿ ಹೇಳಿಕೆ ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಇದರ ಬೆನ್ನಲ್ಲೇ ಇದೀಗ ಯುದ್ಧ ನೌಕೆಯನ್ನ ತಮ್ಮ...

ಸಿದ್ದು ಪರ ಇಂದೂ ಮುಂದುವರೆದ ಬ್ಯಾಟಿಂಗ್- ಕಾಗಿನೆಲೆ ಸ್ವಾಮೀಜಿ ಹೇಳಿಕೆಗೆ ವಿಶ್ವನಾಥ್ ಜೈ

ಹಾವೇರಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಹಮತ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ವಿಶ್ವನಾಥ್, ಮಠಾಧಿಪತಿಗಳೂ ಕೂಡ ಮತದಾರರೇ, ಅವರು ಮತದಾರರಾಗಿ ಹೇಳೋದ್ರಲ್ಲಿ ತಪ್ಪೇನಿಲ್ಲ. ಯಾವುದೇ ಪಕ್ಷದ ಪರ ವೋಟು ಹಾಕಿ ಅಂತ ಹೇಳೋದು ತಪ್ಪು. ಆದ್ರೆ ಯಾರೋ ಒಬ್ರು ಸಿಎಂ ಆಗಲಿ ಅನ್ನೋದ್ರಲ್ಲಿ ತಪ್ಪಿಲ್ಲ ಅಂತ ವಿಶ್ವನಾಥ್ ಹೇಳಿದ್ರು. ಇನ್ನು...

‘ಇನ್ನು 4 ವರ್ಷ ಕುಮಾರಸ್ವಾಮಿಯವ್ರೇ ಸಿಎಂ’

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ -ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಇನ್ನೂ 4 ವರ್ಷ ಸದೃಢವಾಗಿರಲಿದ್ದು, ಪೂರ್ಣಾವಧಿಗೆ ಎಚ್‌.ಡಿ.ಕುಮಾರಸ್ವಾಮಿಯವ್ರೇ ಸಿಎಂ ಅಂತ ಡಿಸಿಎಂ ಡಾ.ಜಿ.ಪರಮೇಶ್ವರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.  ''ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕೆನ್ನೋ ವಿಚಾರ ಸದ್ಯಕ್ಕೆ ಅಪ್ರಸ್ತುತ.5 ವರ್ಷಗಳಿಗೆ ಕುಮಾರಸ್ವಾಮಿ ಅವರೇ ಸಿಎಂ ಅಂತ ಎಐಸಿಸಿ ಹೈಕಮಾಂಡ್‌ ತೀರ್ಮಾನಿಸಿದೆ. ಹೀಗಾಗಿ ಯಾವುದೇ ಬದಲಾವಣೆ ಇಲ್ಲ''...

‘ಯಡಿಯೂರಪ್ಪಗೆ ಅಧಿಕಾರದ ದಾಹ ಜಾಸ್ತಿಯಾಗಿದೆ- ಬಿಜೆಪಿಯವ್ರು ವಂಚಕರು’

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಮೇಲೆ ಸಿಎಂ ಕುಮಾರಸ್ವಾಮಿ ಬೇಹುಗಾರಿಕೆ ಮಾಡ್ತಿದ್ದಾರೆ ಅನ್ನೋ ವಿಚಾರವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ದಿನೇಶ್, ಬೇಹುಗಾರಿಕೆ, ಟೆಲಿಫೋನ್ ಟ್ಯಾಪಿಂಗ್ ನಾವಲ್ಲ. ಸರ್ಕಾರಿ ಯಂತ್ರಗಳ ದುರುಪಯೋಗ ಮಾಡಿಕೊಂಡು ಮೋಸ ವಂಚನೆ ಮಾಡೋವ್ರು ಬಿಜೆಪಿಯವ್ರು ಅಂತ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನ...

ಚೌಕಿದಾರ್ ಚೋರ್ ಹೇಳಿಕೆ- ಬೇಷರತ್ ಕ್ಷಮೆ ಕೋರಿದ ರಾಹುಲ್ ಗಾಂಧಿ

ನವದೆಹಲಿ: 'ಚೌಕಿದಾರ್​ ಚೋರ್​ ಹೈ ಅಂತ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ' ಅಂತ ಹೇಳಿಕೆ ನೀಡಿ ನೋಟಿಸ್​ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್​ ಸಲ್ಲಿಸಿರೋ ರಾಹುಲ್ ಬೇಷರತ್​ ಕ್ಷಮೆ ಯಾಚಿಸಿದ್ದಾರೆ. ಸುಪ್ರೀಂ ಕೋರ್ಟ್​ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ನಾನು ಉದ್ದೇಶಪೂರ್ವಕವಾಗಿ...

‘ಚಿನ್ನ’ದ ಮೀನಿಗೆ ಶುಭಕೋರಿದ ಸಿಎಂ

ಬೆಂಗಳೂರು: ಇತ್ತೀಚೆಗೆ ಬ್ರೆಜಿಲ್ ನಲ್ಲಿ ನಡೆದ ವಿಶ್ವ ಮಟ್ಟದ ಈಜು ಚಾಂಪಿಯನ್ಶಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ ರಾಜ್ಯದ ಈಜುಪಟು ನಿರಂಜನ್ ಮುಕುಂದನ್ ಗೆ ಸಿಎಂ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಸಾವೋಪೋಲೋದಲ್ಲಿ ನಡೆದ ವಿಶ್ವ ಈಜು ಸರಣಿಯ 200 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ...

ನೀವು ಮತ್ತೆ ಸಿಎಂ ಆಗ್ಬೇಕು- ಸಿದ್ದು ‘ಪರ’ ಬ್ಯಾಟಿಂಗ್

ಬಳ್ಳಾರಿ: ಮೈತ್ರಿ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿ ಒಂದು ವರ್ಷವಾದ್ರೂ ಸಿದ್ದರಾಮಯ್ಯ ಮೇಲಿನ ಕ್ರೇಜ್ ಮಾತ್ರ ಅವರ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಇದಕ್ಕೆ ಕಾಂಗ್ರೆಸ್ ನ ಮುಖಂಡರೂ ಹೊರತಾಗಿಲ್ಲ. ಇಂದು ಬಳ್ಳಾರಿಯ ಶ್ರೀ ಕ್ಷೇತ್ರ ಮೈಲಾರದ ಏಳುಕೋಟಿ ಭಕ್ತ ಕುಟೀರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮತ್ತೆ ಸಿದ್ದರಾಮಯ್ಯ ಸಿಎಂ ಆಗ್ಬೇಕು ಅನ್ನೋ ಕೂಗು ಕೇಳಿಬಂತು. ಕಾರ್ಯಕ್ರಮದಲ್ಲಿ ಮಾತನಾಡ್ತಿದ್ದ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್, ಸಿದ್ದರಾಮಯ್ಯ ಮತ್ತೆ...

ಮೋದಿ ಹೇಳಿಕೆಗೆ ಬಿಜೆಪಿ ಹಿರಿಯ ಮುಖಂಡರಿಂದಲೇ ವಿರೋಧ.. !

ಮೈಸೂರು: ರಾಜೀವ್ ಗಾಂಧಿ ಭ್ರಷ್ಟಾಚಾರಿ ಅನ್ನೋ ಹೇಳಿಕೆ ವಿಚಾರವಾಗಿ ದೆಹಲಿ ಹೈಕೋರ್ಟ್ ಪ್ರಧಾನಿ ಮೋದಿಯನ್ನು ಆರೋಪ ಮುಕ್ತ ಮಾಡಿದ್ದಾಯ್ತು. ಆದ್ರೆ ಇದೀಗ ಸ್ವಪಕ್ಷದ ಹಿರಿಯ ಮುಖಂಡರೊಬ್ಬರಿಂದ ಮೋದಿ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಹೌದು ಇತ್ತೀಚೆಗೆ ಲಕ್ನೌ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿಯನ್ನು ಟೀಕಿಸೋ ಭರಾಟೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟರಾಗಿಯೇ...

ಬೆಳಗಾವಿಗೆ ತೆರಳಿದ ರಮೇಶ್ ಜಾರಕಿಹೊಳಿ- ಸಾಹುಕಾರ್ ಮುಂದಿನ ಪ್ಲಾನ್ ಏನು?

ಬೆಂಗಳೂರು: ರಾಜ್ಯ ಸಂಪುಟದಿಂದ ವಜಾಗೊಂಡು ತೀವ್ರ ಅಸಮಾಧಾನಗೊಂಡಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ತಮ್ಮ ನಿಲುವು ಬದಲಿಸಿದಂತಿದೆ. ಹೌದು, ಕಳೆದ 4 ದಿನಗಳಿಂದಲೂ ಬೆಂಗಳೂರಿನಲ್ಲಿ ಆಪ್ತರೊಂದಿಗೆ ತಂಗಿದ್ದ ರಮೇಶ್ ಜಾರಕಿಹೊಳಿ ಇಂದು ಬೆಳಗ್ಗೆ ಗೋಕಾಕ್ ಗೆ ತೆರಳಿದ್ದಾರೆ. ತಾವೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಪ್ತ ಶಾಸಕರಿಂದಲೂ ರಾಜೀನಾಮೆ ಕೊಡಿಸ್ತೇನೆ ಅಂತ ಪಟಾಲಂ ಕಟ್ಟಲು...

‘ನಿಖಿಲ್ ಗೆದ್ದೇ ಗೆಲ್ತಾರೆ- ಅನುಕಂಪದಿಂದ ಮಂಡ್ಯ ಅಭಿವೃದ್ಧಿಯಾಗಲ್ಲ’

ಮಂಡ್ಯ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ತಾರೆ, ಅವರಿಗೆ ಜನರ ಆಶೀರ್ವಾದ ಇದೆ ಅಂತ  ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಡಾ.ಅನ್ನದಾನಿ ಹೇಳಿದ್ದಾರೆ. ಇನ್ನು ಸುಮಲತಾ ಪತಿ ಅಂಬರೀಶ್ ಮೃತಪಟ್ಟಿದ್ದಾರೆ, ಅವರ ಮೇಲೆ ಅನುಕಂಪ ಇದೆ ಎಂದ ಶಾಸಕ, ನಮಗೆ ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ. ಪಕ್ಷೇತರ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಸಾಧ್ಯವಾಗೋದಿಲ್ಲ. ಅನುಕಂಪದಿಂದ ಹೆಚ್ಚುವರಿ ಅನುದಾನ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img